ನವದೆಹಲಿ, ಜ. 10– ಕಾವೇರಿ ಕಣಿವೆ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುಬೇಕೆಂಬ ರಾಜ್ಯಗಳ ಮನವಿಯನ್ನು ಕಾವೇರಿ ಜಲ ವಿವಾದಗಳ ನ್ಯಾಯಮಂಡಲಿಯ ನೂತನ ಅಧ್ಯಕ್ಷ ನ್ಯಾಯಮೂರ್ತಿ ಎನ್.ಪಿ. ಸಿಂಗ್ ಮತ್ತು ಇಬ್ಬರು ಸದಸ್ಯರು ಒಪ್ಪಿದ್ದು, ಬರುವ ಮಾರ್ಚ್ನಲ್ಲಿ ಈ ಭೇಟಿ ಕಾರ್ಯಕ್ರಮವನ್ನು ಕೈಗೊಳ್ಳುವ ಇಂಗಿತವನ್ನು ಅವರು ಇಂದು ವ್ಯಕ್ತಪಡಿಸಿದರು.