ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಮಂಗಳವಾರ, 18.1.1972

Last Updated 17 ಜನವರಿ 2022, 15:06 IST
ಅಕ್ಷರ ಗಾತ್ರ

ಲೋಕಸಭೆ ಚುನಾವಣೆ ನಂತರ ಸೇರಿದವರಿಗೆ (ಆ) ಕಾಂಗ್ರೆಸ್‌ ಟಿಕೆಟ್ಟಿಲ್ಲ

ನವದೆಹಲಿ, ಜ. 17– ಮೈಸೂರು ರಾಜ್ಯದಲ್ಲಿ ಲೋಕಸಭೆ ಮಧ್ಯಂತರ ಚುನಾವಣೆ ನಡೆದ ನಂತರ ಆಡಳಿತ ಕಾಂಗ್ರೆಸ್ಸಿಗೆ ಸೇರಿದ ಸದಸ್ಯರುಗಳಿಗೆ ವಿಧಾನಸಭೆಗೆ ಸ್ಪರ್ಧಿಸಲು ಆ ಪಕ್ಷದ ಟಿಕೆಟ್‌ ಸಿಗುವುದಿಲ್ಲ.

ಇಂದು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಸಮ್ಮುಖದಲ್ಲಿ ನಡೆದ ಮೈಸೂರು ಕಾಂಗ್ರೆಸ್‌ ಚುನಾವಣೆ ಸಮಿತಿ ಸಭೆ ಈ ನಿರ್ಧಾರ ಕೈಗೊಂಡಿತು. ಮುಖ್ಯವಾಗಿ ಸಂಸ್ಥಾ ಕಾಂಗ್ರೆಸ್ಸಿನ ಮಾಜಿ ಸದಸ್ಯರಿಗೆ ಈ ನಿರ್ಧಾರದ ಬಿಸಿ ತಟ್ಟುವುದು.

ಯುದ್ಧದಲ್ಲಿ ಗೆದ್ದಿರುವ ಪ್ರದೇಶ ಪಾಕ್‌ ವಶಕ್ಕೆ ವಾಪಸಿಲ್ಲ: ರಾಂ

ಪಾಟಲೀಪುತ್ರ, ಜ. 17– ಇತ್ತೀಚಿನ ಭಾರತ– ಪಾಕಿಸ್ತಾನ ಯುದ್ಧದಲ್ಲಿ ಗೆದ್ದಿರುವ ಪ್ರದೇಶವನ್ನು ಭಾರತ ಹಿಂತಿರುಗಿಸದು ಎಂದು ರಕ್ಷಣಾ ಸಚಿವ ಜಗಜೀವನರಾಂ ಅವರು ಇಂದು ಇಲ್ಲಿ ಸೂಚನೆಯಿತ್ತರು.

ವಶಪಡಿಸಿಕೊಂಡಿರುವ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿದರೆ ರಾಷ್ಟ್ರಾದ್ಯಂತ ಚಳವಳಿ ನಡೆಸುವುದಾಗಿ ಜನಸಂಘದ ಅಧ್ಯಕ್ಷ ಅಟಲ್‌ ಬಿಹಾರಿ ವಾಜಪೇಯಿ ಅವರಿತ್ತಿರುವ ಬೆದರಿಕೆ ಬಗ್ಗೆ ಜಗಜೀವನರಾಂ ಅವರು ಟೀಕಿಸುತ್ತಾ, ‘ನಾವು ಅಷ್ಟು ಮೂರ್ಖರಲ್ಲ. ಬರೀ ಮಾತನಾಡುವವರಿಗಿಂತ ದೇಶಕ್ಕಾಗಿ ತ್ಯಾಗ ಮಾಡಿರುವವರಿಗೆ ನೋವು ಹೆಚ್ಚು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT