ಬೆಂಗಳೂರು, ಜುಲೈ 14– ಮೇಯರ್ ಶ್ರೀ ಚ. ಲಿಂಗಯ್ಯ ಮತ್ತು ಆಡಳಿತ ಪಕ್ಷದ ನಾಯಕ ಶ್ರೀ ಎಂ.ವಿ. ತಿವಾರಿ ಅವರು ನಗರ ಕಾರ್ಪೊರೇಷನ್ ‘ತಮ್ಮ ಸ್ವಂತ ಆಸ್ತಿ ಎಂಬಂತೆ ವರ್ತಿಸಿ’ ಅಧಿಕಾರಿಗಳ ವರ್ಗಾವಣೆ ಮೊದಲಾದ ವಿಚಾರಗಳಲ್ಲಿ ಹಸ್ತಕ್ಷೇಪ ನೆಡಸುತ್ತಿರುವರೆಂದೂ, ಆಡಳಿತ ಪಕ್ಷದವರೂ ಅದಕ್ಕೆ ಪಾಲುದಾರರಾಗಿದ್ದು ಆಡಳಿತದಲ್ಲಿ ಅನೈತಿಕತೆ ಹೆಚ್ಚಿದೆಯೆಂದೂ, ಹಣ ಮತ್ತಿತರ ಪ್ರಭಾವದ ಹಾವಳಿ ಹೆಚ್ಚಾಗಿದೆಯೆಂದೂ, ಹತ್ತು ಮಂದಿ ವಿರೋಧ ಪಕ್ಷದ ಕಾರ್ಪೊರೇಟರುಗಳು ರಾಜ್ಯಪಾಲ ಶ್ರೀ ಧರ್ಮವೀರ್ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.