ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ, 24–07–1972

Last Updated 23 ಜುಲೈ 2022, 18:42 IST
ಅಕ್ಷರ ಗಾತ್ರ

ಅರ್ಧಬೆಲೆಗೆನಿಘಂಟು: ಸಾಹಿತ್ಯ ಪರಿಷತ್ತಿಗೆ ಸರ್ಕಾರದಿಂದ ಎರಡೂವರೆ ಲಕ್ಷ ರೂ. ನೀಡಿಕೆ

ಬೆಂಗಳೂರು, ಜುಲೈ 23– ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಲಿರುವ ಸುಮಾರು ಒಂದು ಸಾವಿರ ಪುಟಗಳ ನಿಘಂಟನ್ನುಅರ್ಧಬೆಲೆಗೆಒದಗಿಸಲು ಮಾರ್ಗವಾಗುವಂತೆ ಸರ್ಕಾರ ಎರಡೂವರೆ ಲಕ್ಷ ರೂಪಾಯಿ ನೆರವನ್ನು ನೀಡಲು ಒಪ್ಪಿದೆ.

ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ. ನಾರಾಯಣ ಅವರು ಈ ವಿಚಾರವನ್ನು ತಿಳಿಸಿದರು. ಸುಮಾರು 60 ಸಾವಿರ ಉಪಯುಕ್ತ ಪದಗಳನ್ನೊಳಗೊಂಡ ನಿಘಂಟಿನ ಬೆಲೆ 10 ರೂ‍ಪಾಯಿಗಳಾಗುವುದೆಂದೂ, ಹಣಕಾಸಿನ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರ ಆಶ್ವಾಸನೆಯಿಂದ ಅದು ವಿದ್ಯಾರ್ಥಿಗಳ ಕೈಗೆಟುಕುವಂತೆ ಐದು ರೂಪಾಯಿಗೆ ಕೊಡಲು ಸಾಧ್ಯ ಆದೀತೆಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT