‘ಭಿಕ್ಷುಕರಿಗೆ ಏನುಬೇಕೆಂದು ಕೇಳುವ ಹಕ್ಕಿಲ್ಲ’ವೆಂಬ ಗಾದೆಯನ್ನು ಪ್ರಸ್ತಾಪಿಸುತ್ತ ‘ನಮ್ಮ ವಿಷಯದಲ್ಲಿ ಪರಿಸ್ಥಿತಿ ಸ್ವಲ್ಪ ಬೇರೆ ರೀತಿಯದು, ನಮಗೆ ಏನು ಬೇಕೆಂದು ಕೇಳುವ ಹಕ್ಕು ನಮಗಿದೆ. ನಮ್ಮ ಮಿತ್ರರು ಯಾರು, ಶತ್ರುಗಳು ಯಾರು ಎಂಬುದು ವಿಮೋಚನಾ ಸಮರದ ಕಾಲದಲ್ಲಿ ತಿಳಿದುಬಂದಿತು. ಮಿತ್ರರೊಬ್ಬರು ಒಂದು ಲೋಟ ನೀರು ಕೊಟ್ಟರೆ ಯಾವ ಯೋಚನೆಯೂ ಇಲ್ಲದೆ ಅದನ್ನು ಸ್ವೀಕರಿಸುತ್ತೇವೆ. ಆದರೆ ಶತ್ರುವೊಬ್ಬರು ಇಲ್ಲವೆ
ಶತ್ರುವಿನ ಮಿತ್ರರೊಬ್ಬರು ನೀರು ಕೊಟ್ಟರೆ ಅದು ವಿಷವಿರಬಹುದೆಂದು ನಾನು ಶಂಕಿಸುತ್ತೇನೆ’ ಎಂದು ಸಚಿವ ಸಮದ್ ಹೇಳಿದರು.