ಚಂಡೀಘಡ, ಮೇ 21– ಪಂಜಾಬಿನ ಖಾಲ್ರಾ ವಿಭಾಗದಲ್ಲಿ ಇಂದು ಮತ್ತು ನಿನ್ನೆ ಪಾಕಿಸ್ತಾನಿ ಸೈನಿಕರು ಏಕಪ್ರಕಾರವಾಗಿ ನಡೆಸಿದ ಕದನ ವಿರಾಮ ಉಲ್ಲಂಘನೆಗಳಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಮತ್ತು ನಮ್ಮ ಗಡಿ ಭದ್ರತಾ ಪಡೆಯ ಒಬ್ಬ ಯೋಧ ಮೃತಪಟ್ಟಿದ್ದಾರೆ ಪಾಕಿಸ್ತಾನಿ ಸೈನ್ಯ ಪಹರೆ ದಳಗಳು ನಿನ್ನೆ ಈ ವಿಭಾಗದಲ್ಲಿ 2 ಭಾರಿ ಅತಿಕ್ರಮಣ ನಡೆಸಿದವು. ಆಗ ಅವರಿಗೆ ವಾಪಾಸು ಹೋಗುವಂತೆ ಹೇಳಲಾಯಿತು. ಆದರೆ ಹಿಂತಿರುಗಲು ನಿರಾಕರಿಸಿದ ಪಾಕಿಸ್ತಾನಿ ಸೈನಿಕರು ಗುಂಡು ಹಾರಿಸಿದರು. ಇದಕ್ಕೆ ಗಡಿ ಭದ್ರತಾ ಪಡೆ ತಕ್ಕ ಉತ್ತರ ನೀಡಿದೆ.