ನವದೆಹಲಿ, ಏ. 3– ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ನಿನ್ನೆ ರಾತ್ರಿ ಎರಡೂವರೆಯ ಹೊತ್ತಿಗೆ ಬಿಡುಗಡೆ ಮಾಡಿದ ತನ್ನ ಎರಡನೇ ಪಟ್ಟಿಯಲ್ಲಿ ಬಸವರಾಜೇಶ್ವರಿ, ವಿ. ಕೃಷ್ಣರಾವ್, ವಿ. ಶ್ರೀನಿವಾಸ ಪ್ರಸಾದ್, ಎಸ್.ಬಿ. ಸಿದ್ನಾಳ್, ಚಂದ್ರಪ್ರಭಾ ಅರಸ್ ಅವರಿಗೆ ಟಿಕೆಟ್ ನಿರಾಕರಿಸಿದ್ದು ಈ ಬಾರಿ ಹದಿಮೂರು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.