<p><strong>ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ? ಇನ್ನೆರಡು ದಿನಗಳಲ್ಲಿ ಘೋಷಣೆ ನಿರೀಕ್ಷೆ</strong></p>.<p>ನವದೆಹಲಿ, ಜೂನ್ 26– ಇನ್ನೊಂದೆರಡು ದಿನಗಳಲ್ಲಿ ಬಿಹಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ನಿರೀಕ್ಷೆಯಿದೆ.</p>.<p>ಬಿಹಾರ ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೋ ಅವರು ನಿಗದಿಪಡಿಸಿದ ಅವಧಿಯೊಳಗೆ ಬೇರೆ ಸರ್ಕಾರ ರಚಿಸುವುದರಲ್ಲಿ ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಎಂ.ಪಿ. ಸಿನ್ಹ ಅವರು ವಿಫಲವಾಗಿರುವುದೇ ಇದಕ್ಕೆ ಕಾರಣ.</p>.<p><strong>ಮಹಾಜನ್ ವರದಿ: ಉದ್ದೇಶಿತ ಹೊಸ ಸಮಿತಿಗೆ ಒಪ್ಪಿಸಲು ಕೇಂದ್ರ ನಿರ್ಧರಿಸಿಲ್ಲ– ನಾಯಕ್</strong></p>.<p>ಮುಂಬೈ, ಜೂ. 26– ಮಹಾರಾಷ್ಟ್ರ–ಮೈಸೂರು ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿ ಬಗ್ಗೆ ಕೇಂದ್ರ ಸರ್ಕಾರ ಏನೂ ಆಲೋಚಿಸಿಲ್ಲ. ಅಂತರರಾಜ್ಯ ಗಡಿ ವಿವಾದಗಳನ್ನು ಇತ್ಯರ್ಥಪಡಿಸಲು ಇತ್ತೀಚೆಗೆ ರಾಷ್ಟ್ರ ಸಮಗ್ರತೆ ಮಂಡಲಿ ಸಭೆಯಲ್ಲಿ ಸೂಚಿಸಲಾದ ವ್ಯವಸ್ಥೆಯೊಂದಕ್ಕೆ ಈ ವಿಷಯವನ್ನು ಒಪ್ಪಿಸಬೇಕೆ ಎಂಬುದನ್ನು ಅದು ಇನ್ನೂ ನಿರ್ಧರಿಸಬೇಕಾಗಿದೆ.</p>.<p>ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವಿ.ಪಿ. ನಾಯಕ್ ಅವರು ಇಂದು ಈ ವಿಷಯವನ್ನು ತಿಳಿಸಿದರು.</p>.<p><strong>‘ಗಯಾಲಾಲ್’</strong></p>.<p>ಚಂಡೀಗಢ, ಜೂನ್ 26– ಗಯಾಲಾಲ್ ನಿರ್ಗಮಿಸಿದ್ದಾರೆ. ಹರಿಯಾಣದಲ್ಲಿ ನಾಲ್ಕನೆ ಸಾರ್ವತ್ರಿಕ ಚುನಾವಣೆಗಳ ನಂತರ ಅನೇಕ ಬಾರಿ ಪಕ್ಷಾಂತರಗೊಂಡು, ‘ಆಯಾರಾಮರು ಗಯಾಲಾಲರು’ ಎಂಬ ನೂತನ ರಾಜಕೀಯ ಪದಪುಂಜ ಜನಪ್ರಿಯಗೊಳಿಸಲು ಕಾರಣರಾದವರು ಶ್ರೀ ಗಯಾಲಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ? ಇನ್ನೆರಡು ದಿನಗಳಲ್ಲಿ ಘೋಷಣೆ ನಿರೀಕ್ಷೆ</strong></p>.<p>ನವದೆಹಲಿ, ಜೂನ್ 26– ಇನ್ನೊಂದೆರಡು ದಿನಗಳಲ್ಲಿ ಬಿಹಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವ ನಿರೀಕ್ಷೆಯಿದೆ.</p>.<p>ಬಿಹಾರ ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೋ ಅವರು ನಿಗದಿಪಡಿಸಿದ ಅವಧಿಯೊಳಗೆ ಬೇರೆ ಸರ್ಕಾರ ರಚಿಸುವುದರಲ್ಲಿ ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಎಂ.ಪಿ. ಸಿನ್ಹ ಅವರು ವಿಫಲವಾಗಿರುವುದೇ ಇದಕ್ಕೆ ಕಾರಣ.</p>.<p><strong>ಮಹಾಜನ್ ವರದಿ: ಉದ್ದೇಶಿತ ಹೊಸ ಸಮಿತಿಗೆ ಒಪ್ಪಿಸಲು ಕೇಂದ್ರ ನಿರ್ಧರಿಸಿಲ್ಲ– ನಾಯಕ್</strong></p>.<p>ಮುಂಬೈ, ಜೂ. 26– ಮಹಾರಾಷ್ಟ್ರ–ಮೈಸೂರು ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿ ಬಗ್ಗೆ ಕೇಂದ್ರ ಸರ್ಕಾರ ಏನೂ ಆಲೋಚಿಸಿಲ್ಲ. ಅಂತರರಾಜ್ಯ ಗಡಿ ವಿವಾದಗಳನ್ನು ಇತ್ಯರ್ಥಪಡಿಸಲು ಇತ್ತೀಚೆಗೆ ರಾಷ್ಟ್ರ ಸಮಗ್ರತೆ ಮಂಡಲಿ ಸಭೆಯಲ್ಲಿ ಸೂಚಿಸಲಾದ ವ್ಯವಸ್ಥೆಯೊಂದಕ್ಕೆ ಈ ವಿಷಯವನ್ನು ಒಪ್ಪಿಸಬೇಕೆ ಎಂಬುದನ್ನು ಅದು ಇನ್ನೂ ನಿರ್ಧರಿಸಬೇಕಾಗಿದೆ.</p>.<p>ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ವಿ.ಪಿ. ನಾಯಕ್ ಅವರು ಇಂದು ಈ ವಿಷಯವನ್ನು ತಿಳಿಸಿದರು.</p>.<p><strong>‘ಗಯಾಲಾಲ್’</strong></p>.<p>ಚಂಡೀಗಢ, ಜೂನ್ 26– ಗಯಾಲಾಲ್ ನಿರ್ಗಮಿಸಿದ್ದಾರೆ. ಹರಿಯಾಣದಲ್ಲಿ ನಾಲ್ಕನೆ ಸಾರ್ವತ್ರಿಕ ಚುನಾವಣೆಗಳ ನಂತರ ಅನೇಕ ಬಾರಿ ಪಕ್ಷಾಂತರಗೊಂಡು, ‘ಆಯಾರಾಮರು ಗಯಾಲಾಲರು’ ಎಂಬ ನೂತನ ರಾಜಕೀಯ ಪದಪುಂಜ ಜನಪ್ರಿಯಗೊಳಿಸಲು ಕಾರಣರಾದವರು ಶ್ರೀ ಗಯಾಲಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>