<p><strong>ನೇಕಾರರಿಗೆ ರಿಯಾಯ್ತಿ ವಿದ್ಯುತ್: ಭರವಸೆ</strong></p>.<p>ಬೆಂಗಳೂರು, ಡಿ. 31– ವಿದ್ಯುತ್ ದರ ಏರಿಕೆಯಿಂದ ವಿದ್ಯುತ್ ಮಗ್ಗಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ವಿದ್ಯುತ್ ದರ ಕಡಿಮೆ ಮಾಡುವುದರ ಬಗ್ಗೆ ತಾವು ಪ್ರಯತ್ನಿಸುವುದಾಗಿ ಜವಳಿ ಹಾಗೂ ರೇಷ್ಮೆ ಸಚಿವ ಎಂ. ಮಹದೇವ ಇಂದು ಇಲ್ಲಿ ಭರವಸೆ ನೀಡಿದರು.</p>.<p>ಕೇಂದ್ರ ಸರ್ಕಾರದ ನೂತನ ಜವಳಿ ನೀತಿಗೆ ಪೂರಕವಾಗಿ ರಾಜ್ಯ ಸರ್ಕಾರವೂ ತನ್ನದೇ ಆದ ಜವಳಿ ನೀತಿ ರೂಪಿಸುತ್ತದೆ ಎಂದು ಸರ್ಕಾರದ ಶ್ರೀಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ತಾಂತ್ರಿಕ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಸಚಿವರು ತಿಳಿಸಿದರು.</p>.<p><strong>ಸರ್ಕಾರಿ ಖಜಾನೆ ಹಣ ಸಮೇತ ಅಧಿಕಾರಿ ಪರಾರಿ</strong></p>.<p>ಚಿತ್ರದುರ್ಗ, ಡಿ. 31– ಚಳ್ಳಕೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬ ಸುಮಾರು 4.7 ಲಕ್ಷ ರೂಪಾಯಿ ದುರುಪಯೋಗ ಮಾಡಿಕೊಂಡು, ಆ ಪೈಕಿ ಖಜಾನೆಯ ಸುಮಾರು 3.7 ಲಕ್ಷ ಹಣದೊಡನೆ ಒಂದು ವಾರದಿಂದ ತಲೆಮರೆಸಿಕೊಂಡಿದ್ದಾರೆ. ಈತ ಇಂದಿರಾ ಮಹಿಳಾ ಕೇಂದ್ರ<br>ಯೋಜನೆಯ 1.3 ಲಕ್ಷ ರೂಪಾಯಿ ಗಳನ್ನು 2 ತಿಂಗಳ ಹಿಂದೆಯೇ ತೆಗೆದು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೇಕಾರರಿಗೆ ರಿಯಾಯ್ತಿ ವಿದ್ಯುತ್: ಭರವಸೆ</strong></p>.<p>ಬೆಂಗಳೂರು, ಡಿ. 31– ವಿದ್ಯುತ್ ದರ ಏರಿಕೆಯಿಂದ ವಿದ್ಯುತ್ ಮಗ್ಗಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ವಿದ್ಯುತ್ ದರ ಕಡಿಮೆ ಮಾಡುವುದರ ಬಗ್ಗೆ ತಾವು ಪ್ರಯತ್ನಿಸುವುದಾಗಿ ಜವಳಿ ಹಾಗೂ ರೇಷ್ಮೆ ಸಚಿವ ಎಂ. ಮಹದೇವ ಇಂದು ಇಲ್ಲಿ ಭರವಸೆ ನೀಡಿದರು.</p>.<p>ಕೇಂದ್ರ ಸರ್ಕಾರದ ನೂತನ ಜವಳಿ ನೀತಿಗೆ ಪೂರಕವಾಗಿ ರಾಜ್ಯ ಸರ್ಕಾರವೂ ತನ್ನದೇ ಆದ ಜವಳಿ ನೀತಿ ರೂಪಿಸುತ್ತದೆ ಎಂದು ಸರ್ಕಾರದ ಶ್ರೀಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ತಾಂತ್ರಿಕ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಸಚಿವರು ತಿಳಿಸಿದರು.</p>.<p><strong>ಸರ್ಕಾರಿ ಖಜಾನೆ ಹಣ ಸಮೇತ ಅಧಿಕಾರಿ ಪರಾರಿ</strong></p>.<p>ಚಿತ್ರದುರ್ಗ, ಡಿ. 31– ಚಳ್ಳಕೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬ ಸುಮಾರು 4.7 ಲಕ್ಷ ರೂಪಾಯಿ ದುರುಪಯೋಗ ಮಾಡಿಕೊಂಡು, ಆ ಪೈಕಿ ಖಜಾನೆಯ ಸುಮಾರು 3.7 ಲಕ್ಷ ಹಣದೊಡನೆ ಒಂದು ವಾರದಿಂದ ತಲೆಮರೆಸಿಕೊಂಡಿದ್ದಾರೆ. ಈತ ಇಂದಿರಾ ಮಹಿಳಾ ಕೇಂದ್ರ<br>ಯೋಜನೆಯ 1.3 ಲಕ್ಷ ರೂಪಾಯಿ ಗಳನ್ನು 2 ತಿಂಗಳ ಹಿಂದೆಯೇ ತೆಗೆದು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>