<p>ಭಾನುವಾರ, 30-6-1963<br /> <strong>ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತ ಸಿದ್ಧವೆಂದು ನೆಹ್ರು<br /> ಜಲಂಧರ್, ಜೂನ್ 29 </strong>- ಎಲ್ಲ ವಿವಾದಗಳ ಇತ್ಯರ್ಥ ಪಾಕಿಸ್ತಾನಕ್ಕೆ ನಿಜವಾಗಿ ಬೇಕಾದರೆ ಕದನಸ್ತಂಭನ ರೇಖೆ ಆಧಾರದ ಮೇಲೆ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತ ಸಿದ್ಧವೆಂದು ಪ್ರಧಾನ ಮಂತ್ರಿ ನೆಹರೂ ತಿಳಿಸಿದ್ದಾರೆ. ಸ್ಥಳೀಯ ಪತ್ರಿಕೋದ್ಯೋಗಿಯೊಬ್ಬರು ಸಲ್ಲಿಸಿದ್ದ ಪ್ರಶ್ನೆಗಳಿಗೆ ಉತ್ತರವಾಗಿ ಪತ್ರ ಬರೆದು ಪ್ರಧಾನ ಮಂತ್ರಿ ಹೀಗೆ ಸೂಚಿಸಿದ್ದಾರೆ.<br /> <br /> ನೆಹರೂ ಮುಂದುವರಿದು ಪತ್ರದಲ್ಲಿ `ನಾವು ಪಾಕಿಸ್ತಾನದೊಡನೆ ಶಾಂತಿ ಸಹಕಾರದಿಂದ ಬಾಳಬೇಕೆಂದಿದ್ದೇವೆ. ಇದೇ ದೃಷ್ಟಿಯಿಂದಲೇ ನಾವು ಕಾಶ್ಮೀರ ವಿವಾದವನ್ನು ಯುದ್ಧಸ್ತಂಭನ ರೇಖೆ ಆಧಾರವಾಗಿಟ್ಟುಕೊಂಡು ಇತ್ಯರ್ಥ ಮಾಡಲು ಸೂಚಿಸಿದ್ದೆವು' ಎಂದೂ ತಿಳಿಸಿದ್ದಾರೆ.</p>.<p><strong>ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ<br /> ಬೆಂಗಳೂರು, ಜೂನ್ 29 </strong>- ಯುವಕ ಶೇಷಾದ್ರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಈ ಆನಂದ ಹಾಗಿರಲಿ, ಇದನ್ನು ತಿಳಿದ ಅಲ್ಪಕಾಲದಲ್ಲಿಯೇ ಅವನ ಬದುಕೇ ಕೊನೆಗೊಂಡ ದುರಂತ ನಿನ್ನೆಯ ದಿನ ನಗರದಲ್ಲಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾನುವಾರ, 30-6-1963<br /> <strong>ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತ ಸಿದ್ಧವೆಂದು ನೆಹ್ರು<br /> ಜಲಂಧರ್, ಜೂನ್ 29 </strong>- ಎಲ್ಲ ವಿವಾದಗಳ ಇತ್ಯರ್ಥ ಪಾಕಿಸ್ತಾನಕ್ಕೆ ನಿಜವಾಗಿ ಬೇಕಾದರೆ ಕದನಸ್ತಂಭನ ರೇಖೆ ಆಧಾರದ ಮೇಲೆ ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತ ಸಿದ್ಧವೆಂದು ಪ್ರಧಾನ ಮಂತ್ರಿ ನೆಹರೂ ತಿಳಿಸಿದ್ದಾರೆ. ಸ್ಥಳೀಯ ಪತ್ರಿಕೋದ್ಯೋಗಿಯೊಬ್ಬರು ಸಲ್ಲಿಸಿದ್ದ ಪ್ರಶ್ನೆಗಳಿಗೆ ಉತ್ತರವಾಗಿ ಪತ್ರ ಬರೆದು ಪ್ರಧಾನ ಮಂತ್ರಿ ಹೀಗೆ ಸೂಚಿಸಿದ್ದಾರೆ.<br /> <br /> ನೆಹರೂ ಮುಂದುವರಿದು ಪತ್ರದಲ್ಲಿ `ನಾವು ಪಾಕಿಸ್ತಾನದೊಡನೆ ಶಾಂತಿ ಸಹಕಾರದಿಂದ ಬಾಳಬೇಕೆಂದಿದ್ದೇವೆ. ಇದೇ ದೃಷ್ಟಿಯಿಂದಲೇ ನಾವು ಕಾಶ್ಮೀರ ವಿವಾದವನ್ನು ಯುದ್ಧಸ್ತಂಭನ ರೇಖೆ ಆಧಾರವಾಗಿಟ್ಟುಕೊಂಡು ಇತ್ಯರ್ಥ ಮಾಡಲು ಸೂಚಿಸಿದ್ದೆವು' ಎಂದೂ ತಿಳಿಸಿದ್ದಾರೆ.</p>.<p><strong>ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ<br /> ಬೆಂಗಳೂರು, ಜೂನ್ 29 </strong>- ಯುವಕ ಶೇಷಾದ್ರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಈ ಆನಂದ ಹಾಗಿರಲಿ, ಇದನ್ನು ತಿಳಿದ ಅಲ್ಪಕಾಲದಲ್ಲಿಯೇ ಅವನ ಬದುಕೇ ಕೊನೆಗೊಂಡ ದುರಂತ ನಿನ್ನೆಯ ದಿನ ನಗರದಲ್ಲಿ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>