<p><strong>ಪಿ.ಯು.ಸಿ. ಪ್ರವೇಶ ವಯೋಮಿತಿ ನಿಯಮ ಸದ್ಯಕ್ಕೆ ರದ್ದು</strong></p>.<p><strong>ಬೆಂಗಳೂರು, ಜೂನ್ 12–</strong> ಪ್ರಿ ಯೂನಿರ್ವಸಿಟಿ ತರಗತಿಯ ಪ್ರವೇಶಕ್ಕೆ ನಿಗದಿ ಮಾಡಲಾಗಿದ್ದ 15 ವರ್ಷ ವಯೋಮಿತಿಯ ನಿಯಮವನ್ನು 1970ರ ತನಕ ಅಮಾನತ್ತಿನಲ್ಲಿಡಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ತೀರ್ಮಾನಿಸಿದೆ.</p>.<p>**</p>.<p><strong>ಆರ್ಟ್ಸ್, ಸೈನ್ಸ್, ಕಾಮರ್ಸ್ </strong><strong>ಡಿಗ್ರಿ ತರಗತಿಗಳಲ್ಲಿ ಕನ್ನಡ </strong><strong>ಐಚ್ಛಿಕ ಮಾಧ್ಯಮ</strong></p>.<p><strong>ಬೆಂಗಳೂರು, ಜೂನ್ 12– </strong>1968–69ನೇ ಸಾಲಿನಿಂದ ಬಿ.ಎ., ಬಿ.ಎಸ್ಸಿ., ಬಿ.ಕಾಂ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ನಿರ್ಧರಿಸಿದೆ.</p>.<p><strong>**</strong></p>.<p><strong>ಈ ವರ್ಷದಿಂದ ಮೂರು ವರ್ಷದ ಲಾ ಶಿಕ್ಷಣ</strong></p>.<p><strong>ಬೆಂಗಳೂರು, ಜೂನ್ 12–</strong> ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 68–69ನೇ ಸಾಲಿನಿಂದ 3 ವರ್ಷ ಅವಧಿಯ ಲಾ ಪದವಿ ಶಿಕ್ಷಣ ಆರಂಭವಾಗುವುದು.</p>.<p>ಈ ಯೋಜನೆಯನ್ನು ಈ ವರ್ಷದಿಂದ ಜಾರಿಗೆ ತರಲು ಅಕೆಡೆಮಿಕ್ ಕೌನ್ಸಿಲ್ ನಿರ್ಣಯ ಮಾಡಿದೆ.</p>.<p>**</p>.<p><strong>ಕೃಷ್ಣಾ ವಿವಾದ: ಪಂಚಾಯಿತಿಗೆ ಒಪ್ಪಿಸಲು ಕಷ್ಟವಿಲ್ಲ</strong></p>.<p><strong>ಬೆಂಗಳೂರು, ಜೂನ್ 12–</strong> ಸಂಬಂಧಪಟ್ಟ ಎಲ್ಲ ರಾಜ್ಯಗಳು ಪಂಚಾಯಿತಿ ರಚಿಸಬೇಕೆಂದು ಕೇಳಿರುವಾಗ, ಕೃಷ್ಣಾನದಿ ನೀರು ವಿವಾದದ ಇತ್ಯರ್ಥಕ್ಕೆ ಪಂಚಾಯಿತಿಯನ್ನು ನೇಮಿಸಲು ಕೇಂದ್ರಕ್ಕೆ ಕಷ್ಟವೇನೂ ಇಲ್ಲವೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಿ.ಯು.ಸಿ. ಪ್ರವೇಶ ವಯೋಮಿತಿ ನಿಯಮ ಸದ್ಯಕ್ಕೆ ರದ್ದು</strong></p>.<p><strong>ಬೆಂಗಳೂರು, ಜೂನ್ 12–</strong> ಪ್ರಿ ಯೂನಿರ್ವಸಿಟಿ ತರಗತಿಯ ಪ್ರವೇಶಕ್ಕೆ ನಿಗದಿ ಮಾಡಲಾಗಿದ್ದ 15 ವರ್ಷ ವಯೋಮಿತಿಯ ನಿಯಮವನ್ನು 1970ರ ತನಕ ಅಮಾನತ್ತಿನಲ್ಲಿಡಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ತೀರ್ಮಾನಿಸಿದೆ.</p>.<p>**</p>.<p><strong>ಆರ್ಟ್ಸ್, ಸೈನ್ಸ್, ಕಾಮರ್ಸ್ </strong><strong>ಡಿಗ್ರಿ ತರಗತಿಗಳಲ್ಲಿ ಕನ್ನಡ </strong><strong>ಐಚ್ಛಿಕ ಮಾಧ್ಯಮ</strong></p>.<p><strong>ಬೆಂಗಳೂರು, ಜೂನ್ 12– </strong>1968–69ನೇ ಸಾಲಿನಿಂದ ಬಿ.ಎ., ಬಿ.ಎಸ್ಸಿ., ಬಿ.ಕಾಂ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ನಿರ್ಧರಿಸಿದೆ.</p>.<p><strong>**</strong></p>.<p><strong>ಈ ವರ್ಷದಿಂದ ಮೂರು ವರ್ಷದ ಲಾ ಶಿಕ್ಷಣ</strong></p>.<p><strong>ಬೆಂಗಳೂರು, ಜೂನ್ 12–</strong> ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 68–69ನೇ ಸಾಲಿನಿಂದ 3 ವರ್ಷ ಅವಧಿಯ ಲಾ ಪದವಿ ಶಿಕ್ಷಣ ಆರಂಭವಾಗುವುದು.</p>.<p>ಈ ಯೋಜನೆಯನ್ನು ಈ ವರ್ಷದಿಂದ ಜಾರಿಗೆ ತರಲು ಅಕೆಡೆಮಿಕ್ ಕೌನ್ಸಿಲ್ ನಿರ್ಣಯ ಮಾಡಿದೆ.</p>.<p>**</p>.<p><strong>ಕೃಷ್ಣಾ ವಿವಾದ: ಪಂಚಾಯಿತಿಗೆ ಒಪ್ಪಿಸಲು ಕಷ್ಟವಿಲ್ಲ</strong></p>.<p><strong>ಬೆಂಗಳೂರು, ಜೂನ್ 12–</strong> ಸಂಬಂಧಪಟ್ಟ ಎಲ್ಲ ರಾಜ್ಯಗಳು ಪಂಚಾಯಿತಿ ರಚಿಸಬೇಕೆಂದು ಕೇಳಿರುವಾಗ, ಕೃಷ್ಣಾನದಿ ನೀರು ವಿವಾದದ ಇತ್ಯರ್ಥಕ್ಕೆ ಪಂಚಾಯಿತಿಯನ್ನು ನೇಮಿಸಲು ಕೇಂದ್ರಕ್ಕೆ ಕಷ್ಟವೇನೂ ಇಲ್ಲವೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>