5 ಜಿಲ್ಲೆಗಳಲ್ಲಿ ಅಭಾವ ಪರಿಸ್ಥಿತಿ
ಬೆಂಗಳೂರು, ಸೆ. 20– ರಾಜ್ಯದ ಬಹುತೇಕ ಪ್ರದೇಶದಲ್ಲಿ ಫಸಲಿನ ಪರಿಸ್ಥಿತಿ ತೃಪ್ತಿಕರವಾಗಿದ್ದರೂ ಐದು ಜಿಲ್ಲೆಗಳಲ್ಲಿ ಈಗಾಗಲೇ ಭಾಗಶಃ ಬರದ ಬೇಗೆ ತಲೆದೋರಿದೆ. ಗುಲ್ಬರ್ಗದ ಸೇಡಂ, ಷಹಪುರ, ಜೇವರ್ಗಿ, ಬಿಜಾಪುರದ ಬಾಗಲಕೋಟೆ ಮತ್ತಿತರ ಕೆಲವು ಭಾಗಗಳು ರಾಯಚೂರು, ಕೋಲಾರ ಮತ್ತು ಮೈಸೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆ ಅಭಾವದಿಂದ ಬೆಳೆಗಳು ಬಾಗಿ ಈಗಾಗಲೇ ಪರಿಹಾರ ಕಾಮಗಾರಿಗಳು ಪ್ರಾರಂಭವಾಗಿವೆ.