ಮೈಸೂರು, ಮಹಾರಾಷ್ಟ್ರಗಳ ಭಿನ್ನಮತ ಹಾಗೇ ಇದೆ
ಮುಂಬೈ, ಅ. 11 - ಗಡಿ ವಿವಾದದ ಬಗ್ಗೆ ಮೈಸೂರು ಮತ್ತು ಮಹಾರಾಷ್ಟ್ರ ರಾಜ್ಯಗಳ ಬೇರೆ ಬೇರೆಯಾದ ಅಭಿಪ್ರಾಯಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲವೆಂದೂ, ಈವರೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಯಾವ ಪ್ರಗತಿಯನ್ನೂ ಸಾಧಿಸಿಲ್ಲವೆಂದೂ ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಎಚ್. ವಿ. ಪಾಟಿಸ್ಕರ್ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.