ಲೋಕಸಭೆಯ ನಾಮಮಾತ್ರ ಅಧಿವೇಶನ ರದ್ದು
ನವದೆಹಲಿ, ಫೆ. 28– ಪಾರ್ಲಿಮೆಂಟಿನ ‘ನಾಮಮಾತ್ರ ಅಧಿವೇಶನ’ ಕರೆಯುವ ಏರ್ಪಾಟನ್ನು ಮುಂದುವರಿಸಬೇಕೆಂಬ ತನ್ನ ಮುಂಚಿನ ನಿರ್ಧಾರವನ್ನು ಕೇಂದ್ರ ಸರ್ಕಾರ ಇಂದು ಹಠಾತ್ತನೆ ಬದಲಾಯಿಸಿ, ಮಾರ್ಚ್ ತಿಂಗಳಿನಲ್ಲಿ ಹೊಸ ಲೋಕಸಭೆಯ ಅಧಿವೇಶನವನ್ನು ಕರೆಯಲು ನಿರ್ಧರಿಸಿತು.
ಹೊಸ ಲೋಕಸಭೆಯನ್ನು ಕರೆಯುವು ದಕ್ಕಿರುವ ರಾಜ್ಯಾಂಗ ಅಡ್ಡಿಗಳನ್ನು ನಿವಾರಿಸುವ ಸುಗ್ರೀವಾಜ್ಞೆಯೊಂದಕ್ಕೆ ರಾಷ್ಟ್ರಪತಿ ಇಂದು ರಾತ್ರಿ ಸಹಿ ಹಾಕಿದರು.
ಈಗಿನ ಲೋಕಸಭೆಯನ್ನು ತತ್ಕ್ಷಣ ವಿಸರ್ಜಿಸಲಾಗುತ್ತದೆ. ಇಂದು ಅವಸರದಲ್ಲಿ ಕರೆಯಲಾದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಸಂಪುಟದ ಸಭೆ ಒಂದು ಗಂಟೆ ಕಾಲ ನಡೆಯಿತು.