<p><strong>ಪಾಟೀಲರ ‘ಅರ್ಹತೆ’ ಪ್ರಶ್ನಿಸಿ ಮನವಿ: ‘ಅನರ್ಹರಲ್ಲ’: ಎಸ್ಸೆನ್</strong></p>.<p><strong>ಬೆಂಗಳೂರು, ಮೇ 20– </strong>ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಜವಾಬ್ದಾರಿಯುಳ್ಳ ಅಧಿಕಾರ ಸ್ಥಾನದಲ್ಲಿ ಇರುವ ಅರ್ಹತೆಯನ್ನು ಪ್ರಶ್ನಿಸಿ 10 ಮಂದಿ ಕಾಂಗ್ರೆಸ್ ಶಾಸಕರು ಹೈಕಮಾಂಡಿಗೆ ಮನವಿಯನ್ನು ಕಳುಹಿಸಿದ್ದಾರೆ.</p>.<p>ಅರ್ಹತೆಯನ್ನು ಪ್ರಶ್ನಿಸಿ ನೀಡಿರುವ ಎರಡು ಕಾರಣಗಳು ‘ಯಾವ ಸ್ಪರ್ಧಿಯನ್ನೇ ಆಗಲಿ ಅನರ್ಹರನ್ನಾಗಿ ಮಾಡುವ ಕಾರಣಗಳಲ್ಲ’ ಎಂದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ರಾತ್ರಿ ವರದಿಗಾರರಿಗೆ ತಿಳಿಸಿದರು.</p>.<p>**</p>.<p><strong>ಮುಂಬೈನಲ್ಲಿ ಶಿವಸೇನೆ ಹಲ್ಲೆ</strong></p>.<p><strong>ಮುಂಬೈ, ಮೇ 20– </strong>ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬನ ಮೇಲೆ ಹಲ್ಲೆ ನಡೆಸಿದ ಗುಂಪಿನಿಂದ ಆತನನ್ನು ಪಾರು ಮಾಡಲು ಪೊಲೀಸರು ದಕ್ಷಿಣ ಮುಂಬೈ ಪ್ರದೇಶದಲ್ಲಿ ಯತ್ನಿಸಿದಾಗ ಒಬ್ಬ ಪೊಲೀಸ್ ಗಾಯಗೊಂಡ.</p>.<p>ಶಿವಸೇನೆಯವರು ಬೃಹತ್ ಮೆರವಣಿಗೆಯಲ್ಲಿ ಮುಂಬೈ ಕೋಟೆ ಪ್ರದೇಶದಲ್ಲಿ ಹೋಗುತ್ತಿದ್ದಂತೆ ಈ ಘಟನೆ ನಡೆಯಿತು.</p>.<p><strong>**</strong></p>.<p><strong>ಬಸ್ಸುಗಳಲ್ಲಿ ‘ಫೋಟೋಸೆಲ್’</strong></p>.<p><strong>ಬೆಂಗಳೂರು, ಮೇ 20– </strong>ಕಂಡಕ್ಟರುಗಳು ಪ್ರಯಾಣಿಕರಿಗೆ ಟಿಕೇಟುಗಳನ್ನು ಕೊಡದ ಪರಿಣಾಮವಾಗಿ, ಆದಾಯ ಸೋರಿ ಹೋಗುವುದನ್ನು ತಪ್ಪಿಸಲು, ಏರಿ ಇಳಿಯುವ ಪ್ರಯಾಣಿಕರ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುವ ಸ್ವಯಂಚಾಲಿತ ‘ಫೋಟೋಸೆಲ್’ ಉಪಕರಣವನ್ನು ಬಸ್ಸುಗಳಲ್ಲಿ ಇಡುವ ನವೀನ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸಾರಿಗೆ ಸಂಸ್ಥೆಯು ನಿರ್ಧರಿಸಿದೆ.</p>.<p>**</p>.<p><strong>27 ರಂದು ತೀರ್ಥಹಳ್ಳಿಯಲ್ಲಿ ಗೋಪಾಲಗೌಡರ ಸತ್ಯಾಗ್ರಹ</strong></p>.<p><strong>ಬೆಂಗಳೂರು, ಮೇ 20– </strong>ಶಿವಮೊಗ್ಗ ಜಿಲ್ಲೆ ಮತ್ತಿತರ ಕೆಲವು ಕಡೆಗಳಲ್ಲಿ ರಾಜ್ಯದ ಸಂಯುಕ್ತ ಸೋಷಲಿಸ್ಟ್ ಪಾರ್ಟಿಯು ನಡೆಸುತ್ತಿರುವ ‘ಸವಿನಯ ಕಾಯಿದೆಭಂಗ ಚಳವಳಿ’ಯನ್ನು ಇದೇ ವಾರದಲ್ಲಿ ಮೈಸೂರು, ಗುಲ್ಬರ್ಗ, ಬಳ್ಳಾರಿ, ಧಾರವಾಡ ಮತ್ತು ಬೆಂಗಳೂರು ಜಿಲ್ಲೆಗಳಿಗೆ ವಿಸ್ತರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಟೀಲರ ‘ಅರ್ಹತೆ’ ಪ್ರಶ್ನಿಸಿ ಮನವಿ: ‘ಅನರ್ಹರಲ್ಲ’: ಎಸ್ಸೆನ್</strong></p>.<p><strong>ಬೆಂಗಳೂರು, ಮೇ 20– </strong>ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಜವಾಬ್ದಾರಿಯುಳ್ಳ ಅಧಿಕಾರ ಸ್ಥಾನದಲ್ಲಿ ಇರುವ ಅರ್ಹತೆಯನ್ನು ಪ್ರಶ್ನಿಸಿ 10 ಮಂದಿ ಕಾಂಗ್ರೆಸ್ ಶಾಸಕರು ಹೈಕಮಾಂಡಿಗೆ ಮನವಿಯನ್ನು ಕಳುಹಿಸಿದ್ದಾರೆ.</p>.<p>ಅರ್ಹತೆಯನ್ನು ಪ್ರಶ್ನಿಸಿ ನೀಡಿರುವ ಎರಡು ಕಾರಣಗಳು ‘ಯಾವ ಸ್ಪರ್ಧಿಯನ್ನೇ ಆಗಲಿ ಅನರ್ಹರನ್ನಾಗಿ ಮಾಡುವ ಕಾರಣಗಳಲ್ಲ’ ಎಂದು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ರಾತ್ರಿ ವರದಿಗಾರರಿಗೆ ತಿಳಿಸಿದರು.</p>.<p>**</p>.<p><strong>ಮುಂಬೈನಲ್ಲಿ ಶಿವಸೇನೆ ಹಲ್ಲೆ</strong></p>.<p><strong>ಮುಂಬೈ, ಮೇ 20– </strong>ಬೀದಿಯಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬನ ಮೇಲೆ ಹಲ್ಲೆ ನಡೆಸಿದ ಗುಂಪಿನಿಂದ ಆತನನ್ನು ಪಾರು ಮಾಡಲು ಪೊಲೀಸರು ದಕ್ಷಿಣ ಮುಂಬೈ ಪ್ರದೇಶದಲ್ಲಿ ಯತ್ನಿಸಿದಾಗ ಒಬ್ಬ ಪೊಲೀಸ್ ಗಾಯಗೊಂಡ.</p>.<p>ಶಿವಸೇನೆಯವರು ಬೃಹತ್ ಮೆರವಣಿಗೆಯಲ್ಲಿ ಮುಂಬೈ ಕೋಟೆ ಪ್ರದೇಶದಲ್ಲಿ ಹೋಗುತ್ತಿದ್ದಂತೆ ಈ ಘಟನೆ ನಡೆಯಿತು.</p>.<p><strong>**</strong></p>.<p><strong>ಬಸ್ಸುಗಳಲ್ಲಿ ‘ಫೋಟೋಸೆಲ್’</strong></p>.<p><strong>ಬೆಂಗಳೂರು, ಮೇ 20– </strong>ಕಂಡಕ್ಟರುಗಳು ಪ್ರಯಾಣಿಕರಿಗೆ ಟಿಕೇಟುಗಳನ್ನು ಕೊಡದ ಪರಿಣಾಮವಾಗಿ, ಆದಾಯ ಸೋರಿ ಹೋಗುವುದನ್ನು ತಪ್ಪಿಸಲು, ಏರಿ ಇಳಿಯುವ ಪ್ರಯಾಣಿಕರ ಸಂಖ್ಯೆಯನ್ನು ಗುರುತು ಹಾಕಿಕೊಳ್ಳುವ ಸ್ವಯಂಚಾಲಿತ ‘ಫೋಟೋಸೆಲ್’ ಉಪಕರಣವನ್ನು ಬಸ್ಸುಗಳಲ್ಲಿ ಇಡುವ ನವೀನ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸಾರಿಗೆ ಸಂಸ್ಥೆಯು ನಿರ್ಧರಿಸಿದೆ.</p>.<p>**</p>.<p><strong>27 ರಂದು ತೀರ್ಥಹಳ್ಳಿಯಲ್ಲಿ ಗೋಪಾಲಗೌಡರ ಸತ್ಯಾಗ್ರಹ</strong></p>.<p><strong>ಬೆಂಗಳೂರು, ಮೇ 20– </strong>ಶಿವಮೊಗ್ಗ ಜಿಲ್ಲೆ ಮತ್ತಿತರ ಕೆಲವು ಕಡೆಗಳಲ್ಲಿ ರಾಜ್ಯದ ಸಂಯುಕ್ತ ಸೋಷಲಿಸ್ಟ್ ಪಾರ್ಟಿಯು ನಡೆಸುತ್ತಿರುವ ‘ಸವಿನಯ ಕಾಯಿದೆಭಂಗ ಚಳವಳಿ’ಯನ್ನು ಇದೇ ವಾರದಲ್ಲಿ ಮೈಸೂರು, ಗುಲ್ಬರ್ಗ, ಬಳ್ಳಾರಿ, ಧಾರವಾಡ ಮತ್ತು ಬೆಂಗಳೂರು ಜಿಲ್ಲೆಗಳಿಗೆ ವಿಸ್ತರಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>