<p><strong>ಹೊಸ ಸಂಪುಟದಲ್ಲಿ ಜತ್ತಿ, ಕಂಠಿ, ಆರ್.ಎಂ. ಪಾಟೀಲ್, ಅರಸು, ನಾರಾಯಣಗೌಡರಿಲ್ಲ?</strong></p>.<p><strong>ನವದೆಹಲಿ, ಮೇ 27–</strong> ಶ್ರೀ ವೀರೇಂದ್ರ ಪಾಟೀಲ್ ನಾಯಕತ್ವದಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಶ್ರೀ ನಿಜಲಿಂಗಪ್ಪನವರ ಸಂಪುಟದಲ್ಲಿದ್ದ 5 ಮಂದಿ ಸಚಿವರಿಗೆ ಸ್ಥಾನವಿಲ್ಲದಂತಾಗಬಹುದು.</p>.<p>ಹೊಸ ಸರ್ಕಾರದಲ್ಲಿ ಶ್ರೀಗಳಾದ ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ದೇವರಾಜ ಅರಸು, ಆರ್.ಎಂ. ಪಾಟೀಲ್ ಮತ್ತು ನಾರಾಯಣಗೌಡ ಅವರಿಗೆ ಸ್ಥಾನ ಸಿಗದಿರಬಹುದು.</p>.<p>ಶ್ರೀ ರಾಜಶೇಖರ ಮೂರ್ತಿ, ಎಂ.ಪಿ.ಸಿ.ಸಿ. ಕಾರ್ಯದರ್ಶಿ ಶ್ರೀ ಕೆ.ಜಿ. ಲಕ್ಕಪ್ಪ, ಶ್ರೀ ವಸಂತರಾವ್ ಪಾಟೀಲ್, ಪಿ.ಎಂ. ನಾಡಗೌಡ ಅವರಿಗೆ<br /> ಹೊಸ ಸರ್ಕಾರದಲ್ಲಿ ಸ್ಥಾನ ಖಚಿತವಾದಂತೆ ತೋರುತ್ತದೆ.</p>.<p><strong>ಕೇಂದ್ರ ಸಂಪುಟಕ್ಕೆ ಜತ್ತಿ?</strong></p>.<p><strong>ನವದೆಹಲಿ, ಮೇ 27–</strong> ಕೇಂದ್ರ ಸಚಿವ ಸಂಪುಟದಲ್ಲಿ ಶ್ರೀ ಬಿ.ಡಿ. ಜತ್ತಿ ಅವರಿಗೆ ಸ್ಥಾನ ದೊರೆಯುವ ಸಂಭವವಿದೆಯೆಂದು ತಿಳಿದು<br /> ಬಂದಿದೆ.</p>.<p>ಕೇಂದ್ರ ಸಚಿವ ಸಂಪುಟದ ಪುನರ್ರಚನೆ ಬಹಳ ಹಿಂದೆಯೇ ಆಗಬೇಕಿತ್ತು. ಶ್ರೀ ಚೆನ್ನಾರೆಡ್ಡಿ ಅವರ ನಿರ್ಗಮನದಿಂದ ಇದು ತುರ್ತಾಗಿ ಆಗಬೇಕಿದೆ.</p>.<p><strong>ಆದಷ್ಟು ಹೆಚ್ಚು ಜಿಲ್ಲಾ ಪ್ರಾತಿನಿಧ್ಯ</strong></p>.<p><strong>ಬೆಂಗಳೂರು, ಮೇ 27–</strong> ಮುಂದಿನ ಮಂತ್ರಿಮಂಡಲದಲ್ಲಿ ಎಲ್ಲ ಜಿಲ್ಲೆಗಳಿಗೂ ಸಾಧ್ಯವಾಗದಿದ್ದರೆ ಬಹುತೇಕ ಜಿಲ್ಲೆಗಳಿಗೆ ಪ್ರಾತಿನಿಧ್ಯವಿರುವುದೆಂದು ನೂತನ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರ ಸಮೀಪ ವಲಯಗಳಿಂದ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸ ಸಂಪುಟದಲ್ಲಿ ಜತ್ತಿ, ಕಂಠಿ, ಆರ್.ಎಂ. ಪಾಟೀಲ್, ಅರಸು, ನಾರಾಯಣಗೌಡರಿಲ್ಲ?</strong></p>.<p><strong>ನವದೆಹಲಿ, ಮೇ 27–</strong> ಶ್ರೀ ವೀರೇಂದ್ರ ಪಾಟೀಲ್ ನಾಯಕತ್ವದಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಶ್ರೀ ನಿಜಲಿಂಗಪ್ಪನವರ ಸಂಪುಟದಲ್ಲಿದ್ದ 5 ಮಂದಿ ಸಚಿವರಿಗೆ ಸ್ಥಾನವಿಲ್ಲದಂತಾಗಬಹುದು.</p>.<p>ಹೊಸ ಸರ್ಕಾರದಲ್ಲಿ ಶ್ರೀಗಳಾದ ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ದೇವರಾಜ ಅರಸು, ಆರ್.ಎಂ. ಪಾಟೀಲ್ ಮತ್ತು ನಾರಾಯಣಗೌಡ ಅವರಿಗೆ ಸ್ಥಾನ ಸಿಗದಿರಬಹುದು.</p>.<p>ಶ್ರೀ ರಾಜಶೇಖರ ಮೂರ್ತಿ, ಎಂ.ಪಿ.ಸಿ.ಸಿ. ಕಾರ್ಯದರ್ಶಿ ಶ್ರೀ ಕೆ.ಜಿ. ಲಕ್ಕಪ್ಪ, ಶ್ರೀ ವಸಂತರಾವ್ ಪಾಟೀಲ್, ಪಿ.ಎಂ. ನಾಡಗೌಡ ಅವರಿಗೆ<br /> ಹೊಸ ಸರ್ಕಾರದಲ್ಲಿ ಸ್ಥಾನ ಖಚಿತವಾದಂತೆ ತೋರುತ್ತದೆ.</p>.<p><strong>ಕೇಂದ್ರ ಸಂಪುಟಕ್ಕೆ ಜತ್ತಿ?</strong></p>.<p><strong>ನವದೆಹಲಿ, ಮೇ 27–</strong> ಕೇಂದ್ರ ಸಚಿವ ಸಂಪುಟದಲ್ಲಿ ಶ್ರೀ ಬಿ.ಡಿ. ಜತ್ತಿ ಅವರಿಗೆ ಸ್ಥಾನ ದೊರೆಯುವ ಸಂಭವವಿದೆಯೆಂದು ತಿಳಿದು<br /> ಬಂದಿದೆ.</p>.<p>ಕೇಂದ್ರ ಸಚಿವ ಸಂಪುಟದ ಪುನರ್ರಚನೆ ಬಹಳ ಹಿಂದೆಯೇ ಆಗಬೇಕಿತ್ತು. ಶ್ರೀ ಚೆನ್ನಾರೆಡ್ಡಿ ಅವರ ನಿರ್ಗಮನದಿಂದ ಇದು ತುರ್ತಾಗಿ ಆಗಬೇಕಿದೆ.</p>.<p><strong>ಆದಷ್ಟು ಹೆಚ್ಚು ಜಿಲ್ಲಾ ಪ್ರಾತಿನಿಧ್ಯ</strong></p>.<p><strong>ಬೆಂಗಳೂರು, ಮೇ 27–</strong> ಮುಂದಿನ ಮಂತ್ರಿಮಂಡಲದಲ್ಲಿ ಎಲ್ಲ ಜಿಲ್ಲೆಗಳಿಗೂ ಸಾಧ್ಯವಾಗದಿದ್ದರೆ ಬಹುತೇಕ ಜಿಲ್ಲೆಗಳಿಗೆ ಪ್ರಾತಿನಿಧ್ಯವಿರುವುದೆಂದು ನೂತನ ನಾಯಕ ಶ್ರೀ ವೀರೇಂದ್ರ ಪಾಟೀಲ್ ಅವರ ಸಮೀಪ ವಲಯಗಳಿಂದ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>