<p><strong>ಮಂಡ್ಯ ಸಕ್ಕರೆ ಕಾರ್ಖಾನೆ ಇಂದಿನಿಂದ ಬಂದ್: ಆಡಳಿತ ವರ್ಗದ ಕ್ರಮ</strong></p>.<p><strong>ಬೆಂಗಳೂರು, ಜೂ. 14–</strong> ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಜೂನ್ 15ರಿಂದ ಮುಚ್ಚಲಾಗುವುದು.</p>.<p>ಕಾರ್ಖಾನೆ ಮುಚ್ಚುವ ಬಗ್ಗೆ ಕಾರ್ಖಾನೆಯ ಆಡಳಿತ ನೋಟಿಸ್ ಹೊರಡಿಸಿರುವುದನ್ನು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದ ಕೈಗಾರಿಕೆ ಹಾಗೂ ವಾರ್ತೆ ಸಚಿವ ಶ್ರೀ ಎಂ. ರಾಜಶೇಖರಮೂರ್ತಿ ಅವರು ‘ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ’ ಎಂದೂ ಹೇಳಿದರು.</p>.<p><strong>**</strong></p>.<p><strong>ರಾಜ್ಯದಿಂದಾಚೆ ಬೆಲ್ಲ ಸಾಗಣೆ ನಿರ್ಬಂಧ?</strong></p>.<p><strong>ಬೆಂಗಳೂರು, ಜೂ. 14– </strong>ಸಕ್ಕರೆ ಕಾರ್ಖಾನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ದೊರಕುವಂತೆ ಮಾಡುವ ಉದ್ದೇಶದಿಂದ ರಾಜ್ಯದಿಂದ ಹೊರಗಡೆಗೆ, ಬೆಲ್ಲ ಕಳುಹಿಸುವುದರ ಮೇಲೆ ನಿರ್ಬಂಧ ಹೊರಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ.</p>.<p>ಸರ್ಕಾರದ ಈ ಯೋಚನೆಯನ್ನು ವಾರ್ತೆ ಸಚಿವ ಶ್ರೀ ಎಂ. ರಾಜಶೇಖರಮೂರ್ತಿ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<p><strong>**</strong></p>.<p><strong>ಮೂರು ತಿಂಗಳಲ್ಲಿ ಭೂಕಂದಾಯ ರದ್ದು ಮಾಡದೆ ಇದ್ದರೆ ಪಿ.ಎಸ್.ಪಿ. ಚಳವಳಿ</strong></p>.<p><strong>ಬೆಂಗಳೂರು, ಜೂ. 14–</strong> ರಾಜ್ಯದಲ್ಲಿ ಭೂಕಂದಾಯವನ್ನು ತತ್ಕ್ಷಣವೇ ರದ್ದುಪಡಿಸಬೇಕೆಂದು ಪ್ರಜಾ ಸೋಷಲಿಸ್ಟ್ ಪಕ್ಷ ಇಂದು ಕರೆಯಿತ್ತಿದೆ.</p>.<p>**</p>.<p><strong>ನಾಗಾಲ್ಯಾಂಡ್ ಸರ್ಕಾರ ಉರುಳಿಸಲು ಚೀನ, ಗುಪ್ತ ನಾಗಾ ಸಂಚು</strong></p>.<p><strong>ಕೋಹಿಮ, ಜೂ. 14– </strong>ಕಮ್ಯುನಿಸ್ಟ್ ಚೀನಾ ಸಹಾಯದಿಂದ ಮನ್ನಣೆ ಪಡೆದ ಗುಪ್ತ ನಾಗಾಗಳು ಸಂವಿಧಾನಬದ್ಧ ನಾಗಾಲ್ಯಾಂಡ್ ಸರ್ಕಾರವನ್ನು ಉರುಳಿಸಲು ಯೋಚಿಸಲಾದ ಭಾರಿ ಪಿತೂರಿಯೊಂದು ಪತ್ತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ ಸಕ್ಕರೆ ಕಾರ್ಖಾನೆ ಇಂದಿನಿಂದ ಬಂದ್: ಆಡಳಿತ ವರ್ಗದ ಕ್ರಮ</strong></p>.<p><strong>ಬೆಂಗಳೂರು, ಜೂ. 14–</strong> ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಜೂನ್ 15ರಿಂದ ಮುಚ್ಚಲಾಗುವುದು.</p>.<p>ಕಾರ್ಖಾನೆ ಮುಚ್ಚುವ ಬಗ್ಗೆ ಕಾರ್ಖಾನೆಯ ಆಡಳಿತ ನೋಟಿಸ್ ಹೊರಡಿಸಿರುವುದನ್ನು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದ ಕೈಗಾರಿಕೆ ಹಾಗೂ ವಾರ್ತೆ ಸಚಿವ ಶ್ರೀ ಎಂ. ರಾಜಶೇಖರಮೂರ್ತಿ ಅವರು ‘ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ’ ಎಂದೂ ಹೇಳಿದರು.</p>.<p><strong>**</strong></p>.<p><strong>ರಾಜ್ಯದಿಂದಾಚೆ ಬೆಲ್ಲ ಸಾಗಣೆ ನಿರ್ಬಂಧ?</strong></p>.<p><strong>ಬೆಂಗಳೂರು, ಜೂ. 14– </strong>ಸಕ್ಕರೆ ಕಾರ್ಖಾನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ದೊರಕುವಂತೆ ಮಾಡುವ ಉದ್ದೇಶದಿಂದ ರಾಜ್ಯದಿಂದ ಹೊರಗಡೆಗೆ, ಬೆಲ್ಲ ಕಳುಹಿಸುವುದರ ಮೇಲೆ ನಿರ್ಬಂಧ ಹೊರಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ.</p>.<p>ಸರ್ಕಾರದ ಈ ಯೋಚನೆಯನ್ನು ವಾರ್ತೆ ಸಚಿವ ಶ್ರೀ ಎಂ. ರಾಜಶೇಖರಮೂರ್ತಿ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.</p>.<p><strong>**</strong></p>.<p><strong>ಮೂರು ತಿಂಗಳಲ್ಲಿ ಭೂಕಂದಾಯ ರದ್ದು ಮಾಡದೆ ಇದ್ದರೆ ಪಿ.ಎಸ್.ಪಿ. ಚಳವಳಿ</strong></p>.<p><strong>ಬೆಂಗಳೂರು, ಜೂ. 14–</strong> ರಾಜ್ಯದಲ್ಲಿ ಭೂಕಂದಾಯವನ್ನು ತತ್ಕ್ಷಣವೇ ರದ್ದುಪಡಿಸಬೇಕೆಂದು ಪ್ರಜಾ ಸೋಷಲಿಸ್ಟ್ ಪಕ್ಷ ಇಂದು ಕರೆಯಿತ್ತಿದೆ.</p>.<p>**</p>.<p><strong>ನಾಗಾಲ್ಯಾಂಡ್ ಸರ್ಕಾರ ಉರುಳಿಸಲು ಚೀನ, ಗುಪ್ತ ನಾಗಾ ಸಂಚು</strong></p>.<p><strong>ಕೋಹಿಮ, ಜೂ. 14– </strong>ಕಮ್ಯುನಿಸ್ಟ್ ಚೀನಾ ಸಹಾಯದಿಂದ ಮನ್ನಣೆ ಪಡೆದ ಗುಪ್ತ ನಾಗಾಗಳು ಸಂವಿಧಾನಬದ್ಧ ನಾಗಾಲ್ಯಾಂಡ್ ಸರ್ಕಾರವನ್ನು ಉರುಳಿಸಲು ಯೋಚಿಸಲಾದ ಭಾರಿ ಪಿತೂರಿಯೊಂದು ಪತ್ತೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>