* ಮುಖ್ಯಮಂತ್ರಿ ಸ್ಪಷ್ಟನೆ: ಪ್ರದೇಶಗಳ ಬಗ್ಗೆ ತಾರತಮ್ಯ ತೋರಿಲ್ಲ
ಬೆಂಗಳೂರು, ಮೇ 30– ಹಳೆ ಮೈಸೂರು– ಹೊಸ ಮೈಸೂರುಗಳ ನಡುವೆ ಸಾರ್ವಜನಿಕ ಸೌಕರ್ಯಗಳ ಪೂರೈಕೆಯಲ್ಲಿ ತಾರತಮ್ಯವಾಗುತ್ತಿದೆಯೆ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನೀಡಿದ ಚುಟುಕಿನ ಉತ್ತರ, ಕರ್ನಾಟಕ ಪತ್ರಕರ್ತರ ಸಂಘದಲ್ಲಿ ನೆರೆದ ಪತ್ರಕರ್ತರಲ್ಲಿ ಒಂದು ಕ್ಷಣ ನಗುವೆಬ್ಬಿಸಿದರೂ, ಬಹಳ ಹಿಂದಿನಿಂದ ಬಂದ ಟೀಕೆಯೊಂದಕ್ಕೆ ಅವರು ಸಮಾಧಾನ ಹೇಳಿದಂತಾಗಿತ್ತು.