ಮದರಾಸ್, ಮಾ. 21– ಮದರಾಸ್–ಬೆಂಗಳೂರು ನಡುವೆ ಓಡಾಡುವ ಬೃಂದಾವನ್ ಎಕ್ಸ್ಪ್ರೆಸ್ ವೇಗವನ್ನು ಮುಂದಿನ ತಿಂಗಳಿಂದ ಹೆಚ್ಚಿಸಲಾಗುವುದು. ಇದರಿಂದಾಗಿ ಈಗ ಇರುವ ಸಂಚಾರದ ಅವಧಿ ಎಂದರೆ 5 ಗಂಟೆ 25 ನಿಮಿಷಗಳಲ್ಲಿ 15 ನಿಮಿಷ ಕಡಿಮೆಯಾಗುವುದು. ಎಕ್ಸ್ ಪ್ರೆಸ್ ಟ್ರೈನ್ ಜಾಲಾರಪೇಟೆ ನಿಲ್ದಾಣದಲ್ಲಿ ನಿಲ್ಲುವುದಿಲ್ಲ ಎಂದು ಚೀಫ್ ಆಪರೇಟಿಂಗ್ ಸೂಪರಿಂಟೆಂಡೆಂಟ್ ಶ್ರೀ ಸಾಲ್ಡಾನಾ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.