ಓದುತ್ತಾ ಆ ಯುವಕ ರಸ್ತೆಯೆಡೆಗೆ ನೋಡಿ ಹೌಹಾರಿದ. ಅಲ್ಲಿ ತಳ್ಳುಗಾಡಿಯೊಂದರ ಎದುರು ಸ್ವತಃ ನಾಗೇಂದ್ರರಾಯರು ತರಕಾರಿ ಖರೀದಿಸುತ್ತಿದ್ದರು. ಅವರ ಬಳಿ ಹೋಗಿ ಯುವಕ ಕೇಳಿದ. ‘ಏನ್ಸಾರ್ ಇದು? ಈವತ್ತು ಪ್ರಶಸ್ತಿ ತಗೊಳ್ಳುವುದನ್ನು ಬಿಟ್ಟು ಇಲ್ಲಿಯೇ ಇದ್ದೀರಲ್ಲ?’ ನಾಗೇಂದ್ರರಾಯರು ನಸುನಕ್ಕು ಹೇಳಿದರು. ‘ಅಯ್ಯೋ, ನನ್ನ ಪದ್ಮಶ್ರೀ (ಪತ್ನಿ) ಮನೆಯಲ್ಲಿಯೇ ಇದ್ದಾಳಪ್ಪ. ಅವಳಿಗಿಂತ ಹೆಚ್ಚಿನ ಪ್ರಶಸ್ತಿ ನನಗೆ ಇವರೇನು ಕೊಟ್ಟಾರು?’ ಯುವಕ ಅವಾಕ್ಕಾದ. ವಶೀಲಿಬಾಜಿ, ಹಣಬಲ, ರಾಜಕೀಯ ಒತ್ತಡಗಳಿಂದಲೇ ಪ್ರಶಸ್ತಿ ಗಳಿಸುವ ಇಂದಿನ ಜನರನ್ನು ಗಮನಿಸಿದಾಗ, ನಾಗೇಂದ್ರರಾಯರು ನಿಜಕ್ಕೂ ಅನುಕರಣೀಯರು, ಪ್ರಾತಃಸ್ಮರಣೀಯರು. ನಾಳೆ (ಫೆ. 9) ಅವರ ಪುಣ್ಯಸ್ಮರಣೆ. ಅವರಿಗೊಂದು ನಮನ.