ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಸ್ಸಾಹಸ ಬೇಡ, ಪರಿವರ್ತಕ ಸ್ಥಳಾಂತರಿಸಿ

Last Updated 5 ಡಿಸೆಂಬರ್ 2022, 18:17 IST
ಅಕ್ಷರ ಗಾತ್ರ

ಮೊಳಕಾಲ್ಮುರು ತಾಲ್ಲೂಕಿನ ಗುಂಡ್ಲೂರು ಕೆರೆಯ ಮಧ್ಯದಲ್ಲಿರುವ ವಿದ್ಯುತ್‌ ಪರಿವರ್ತಕವು ಕೆಟ್ಟುಹೋದ ಕಾರಣಕ್ಕಾಗಿ ಲೈನ್‌ಮ್ಯಾನ್‌ ಸುನಿಲ್‌ ಕುಮಾರ್‌ ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಸುಮಾರು ದೂರ ಕೆರೆಯಲ್ಲಿ ಈಜಿಕೊಂಡು ಹೋಗಿ ದುರಸ್ತಿಪಡಿಸಿರುವುದು(ಪ್ರ.ವಾ., ಡಿ. 5) ನಿಜಕ್ಕೂ ಶ್ಲಾಘನೀಯ. ಆದರೆ ಅವರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದಿತ್ತು. ಅಕಸ್ಮಾತ್‌ ಅವಘಡ ಸಂಭವಿಸಿದ್ದರೆ ಪ್ರಸ್ತುತ ಅವರನ್ನು ವೈಭವೀಕರಿಸುತ್ತಿರುವ ಸಾಮಾಜಿಕ ಜಾಲತಾಣಗಳು ಇಡೀ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡು, ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದವು. ಪೊಲೀಸ್‌ ಇಲಾಖೆಗೂ ಮಸಿ ಬಳಿಯುತ್ತಿದ್ದವು.

ಬೆಸ್ಕಾಂ ಅಧಿಕಾರಿಗಳು ಕೆರೆಯ ನೀರಿನಲ್ಲಿರುವ ವಿದ್ಯುತ್‌ ಪರಿವರ್ತಕವನ್ನು ಸ್ಥಳಾಂತರಿಸಿ, ತಮ್ಮ ಇಲಾಖೆ ಸಿಬ್ಬಂದಿಯು ಅಪಾಯಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಕಾರ್ಯಪ್ರವೃತ್ತರಾಗಬೇಕು.

ಪ.ಚಂದ್ರಕುಮಾರ ಗೌನಹಳ್ಳಿ,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT