ಮೊಳಕಾಲ್ಮುರು ತಾಲ್ಲೂಕಿನ ಗುಂಡ್ಲೂರು ಕೆರೆಯ ಮಧ್ಯದಲ್ಲಿರುವ ವಿದ್ಯುತ್ ಪರಿವರ್ತಕವು ಕೆಟ್ಟುಹೋದ ಕಾರಣಕ್ಕಾಗಿ ಲೈನ್ಮ್ಯಾನ್ ಸುನಿಲ್ ಕುಮಾರ್ ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಸುಮಾರು ದೂರ ಕೆರೆಯಲ್ಲಿ ಈಜಿಕೊಂಡು ಹೋಗಿ ದುರಸ್ತಿಪಡಿಸಿರುವುದು(ಪ್ರ.ವಾ., ಡಿ. 5) ನಿಜಕ್ಕೂ ಶ್ಲಾಘನೀಯ. ಆದರೆ ಅವರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದಿತ್ತು. ಅಕಸ್ಮಾತ್ ಅವಘಡ ಸಂಭವಿಸಿದ್ದರೆ ಪ್ರಸ್ತುತ ಅವರನ್ನು ವೈಭವೀಕರಿಸುತ್ತಿರುವ ಸಾಮಾಜಿಕ ಜಾಲತಾಣಗಳು ಇಡೀ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡು, ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತಿದ್ದವು. ಪೊಲೀಸ್ ಇಲಾಖೆಗೂ ಮಸಿ ಬಳಿಯುತ್ತಿದ್ದವು.