ಸ್ವಾಮೀಜಿಯಾಗಲು ಹೊರಟಿರುವ ರಾಜಕಾರಣಿ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಕೆ.ವಿ.ವಾಸು ಅವರು ‘ಪರಮಾರ್ಥ ಅರಿತ ರಾಜಕಾರಣಿ’ ಎಂದಿರುವುದು (ವಾ.ವಾ., ಏ. 8) ಸರಿಯಷ್ಟೆ. ಆದರೆ ಪುಟ್ಟಸ್ವಾಮಿ ಅವರು ಪೀಠಾಧಿಪತಿಯಾಗಲು ಮುಂದಾಗಿರುವುದು ಅವರಲ್ಲಿ ಹುಟ್ಟಿದ ವೈರಾಗ್ಯದಿಂದಾಗಲೀ ಅನುಭಾವದಿಂದಾಗಲೀ ಅಲ್ಲ. ಸ್ವಾಮೀಜಿಯೊಬ್ಬರು ‘ದೇವಿಯು ನೀವೇ ಪೀಠಾಧಿಪತಿಯಾಗಬೇಕೆಂದು ನುಡಿದಿದ್ದಾಳೆ’ ಎಂದು ಹೇಳಿದ ಭವಿಷ್ಯವಾಣಿಯಿಂದ ರೋಮಾಂಚನಗೊಂಡು ದಿಢೀರ್ ನಿರ್ಧಾರಕ್ಕೆ ಬಂದಿರುವುದು ಸ್ಪಷ್ಟ.