ಕೇಂದ್ರ ಸರ್ಕಾರವು ಬಿಎಸ್ಎನ್ಎಲ್ ಪುನಶ್ವೇತನಕ್ಕೆ ₹ 1.64 ಲಕ್ಷ ಕೋಟಿ ಮೊತ್ತದ ಬೃಹತ್ ಪ್ಯಾಕೇಜ್ ಪ್ರಕಟಿಸಿರುವುದು ಸ್ವಾಗತಾರ್ಹ ಕ್ರಮವಾದರೂ ದೇಕುತ್ತಿರುವ ಈ ಕಂಪನಿ ಎದ್ದು ನಿಲ್ಲಲು ಈ ನೆರವು ಅನುವಾಗಿಸುವುದೇ ಎಂಬುದು ಪ್ರಶ್ನೆ.
ಒಂದು ಕಾಲದಲ್ಲಿ ಗ್ರಾಹಕರ ಅತ್ಯಂತ ನೆಚ್ಚಿನ ಕಂಪನಿಯಾಗಿದ್ದ ಇದು, ಈಗ ನಿಶ್ಶಕ್ತಗೊಂಡಿದೆ. ನೌಕರರಲ್ಲಿನ ಬದ್ಧತೆ ಕೊರತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ನಲುಗಿಹೋಗಿದೆ. ಎಚ್ಎಂಟಿಗೆ ಒದಗಿದ ಗತಿ ಇದಕ್ಕೂ ಬರಬಹುದು ಎಂಬ ಅನುಮಾನ ಇದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡು, ದಕ್ಷತೆ ಹೆಚ್ಚಿಸಿಕೊಂಡರೆ ಪುಟಿದೇಳಬಹುದು. ಆದರೆ ಅದಕ್ಕೆ ಇಚ್ಛಾಶಕ್ತಿ ಬೇಕು.
-ಯಲುವಹಳ್ಳಿ ಸೊಣ್ಣೇಗೌಡ,ಚಿಕ್ಕಬಳ್ಳಾಪುರ