ಆದರೆ ಇದು ಅಷ್ಟು ಸರಳವಾಗಿ ನೋಡಬೇಕಾದ ಸಂಗತಿಯಲ್ಲ. ಕಾರಣ: ಅವರು ಆಡಂಬರದ ಜೀವನಕ್ಕೆ ವಶವಾಗಿರುತ್ತಾರೆ. ಅದಕ್ಕೆ ಬೇಕಾದ ಅಧಿಕ ಹಣವನ್ನು ಶ್ರಮಜೀವಿಗಳಿಗೆ ಕಡಿಮೆವೇತನ ನೀಡಿ, ಸವಲತ್ತುಗಳನ್ನು ನಿರಾಕರಣೆ ಮಾಡಿ ಸಂಪಾದನೆ ಮಾಡುತ್ತಾರೆ. ಕೆಲವೇ ಜನರ ಆಡಂಬರದ ಜೀವನ, ಹಲವು ಜನರ ಸಂಕಟದಲ್ಲಿಪರ್ಯವಸಾನವಾಗುತ್ತದೆ. ಈ ರೋಗಕ್ಕೆ ಮದ್ದಿನ ಅಗತ್ಯ ಇದೆ. ಆದರೆ ಸರ್ಕಾರ ನಡೆಸುವವರ ಆಡಂಬರಕ್ಕೆ ಪಂಚತಾರಾ ಹೋಟೆಲುಗಳು ಬೇಕು. ಇನ್ನು ಗಂಟೆ ಕಟ್ಟುವವರನ್ನು ಎಲ್ಲಿಂದ ತರುವುದು?