ಸಿದ್ದರಾಮಯ್ಯನವರ ಇತ್ತೀಚಿನ ಮಾತು (ಪ್ರ.ವಾ., ಮೇ 29) ಓದಿದೆ. ವಿಷಯಗಳನ್ನು ಬೆರೆಸುವುದು ರಾಜಕಾರಣಿಗಳ ಹಳೇ ತೆವಲು. ಪಠ್ಯಪುಸ್ತಕ, ಆರ್ಎಸ್ಎಸ್, ನೆಹರೂ, ಕುವೆಂಪು ಇವುಗಳ ಮಧ್ಯೆ ಆರ್ಯ- ದ್ರಾವಿಡ ಏಕೆ ಬಂತೋ ಗೊತ್ತಾಗುತ್ತಿಲ್ಲ. ಆರ್ಯನ್ ಖಾನ್- ರಾಹುಲ್ ದ್ರಾವಿಡ್ ಅವರನ್ನೂ ಎಳೆದುತಂದರೆ ಆಶ್ಚರ್ಯವಿಲ್ಲ! ದ್ರಾವಿಡರು ಭಾರತದ ಮೂಲನಿವಾಸಿಗಳು, ಆರ್ಯರು ಹೊರಗಿನಿಂದ ವಲಸೆ ಬಂದವರು ಎಂಬ ಹಳೆಯ ಪಠ್ಯಪುಸ್ತಕದ ಕಥನಕ್ಕೆ ಕೆಲವು ಪುರಾತತ್ವಶಾಸ್ತ್ರಜ್ಞರು, ಇತಿಹಾಸ ಅಧ್ಯಯನಕಾರರು ಸವಾಲು ಎಸೆದಿದ್ದಾರೆ.