ಜನಪ್ರತಿನಿಧಿಗಳು ಬರೀ ಹಣವನ್ನು ದೇಣಿಗೆ ಕೊಟ್ಟು ಕುಳಿತರೆ ಸಾಲದು. ತಮ್ಮ ಕ್ಷೇತ್ರದಲ್ಲಿನ ಸ್ಥಿತಿಗತಿಯನ್ನು ಅವರು ಅವಲೋಕಿಸಬೇಕು. ಕೊರೊನಾ ಸೋಂಕು ತಡೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಲವು ಇಲಾಖಾ ಸಿಬ್ಬಂದಿಯನ್ನು ಉತ್ತೇಜಿಸಬೇಕು. ತಮ್ಮ ಗುರುತರ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೇರಿಸಿ, ತಾವು ಅಜ್ಞಾತವಾಸದಲ್ಲಿ ಇರುವುದು ಸೂಕ್ತವಲ್ಲ.