ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಟ್ಟಿಭತ್ಯೆ: ಸ್ವಾಗತಾರ್ಹ ನಿಲುವು

ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಸಲಾಗಿದ್ದ ತುಟ್ಟಿಭತ್ಯೆ ಹೆಚ್ಚಳದ ಮನವಿಯು ಸಾಕಾರಗೊಂಡಿದ್ದು, ಈ ವರ್ಷದ ಜನವರಿ ಒಂದರಿಂದ ಪೂರ್ವಾನ್ವಯವಾಗಿ ಜಾರಿಯಾಗಲಿರುವುದು ಸ್ವಾಗತಾರ್ಹವಾಗಿದೆ. ಇಂದಿನ ಬೆಲೆ ಏರಿಕೆಯ ದಿನಮಾನಗಳಲ್ಲಿ ಈ ಉಪಕ್ರಮವು ಅವಶ್ಯಕವಾಗಿತ್ತು. ದಿನದಿಂದ ದಿನಕ್ಕೆ ಏರುತ್ತಿರುವ ದಿನಸಿ ಪದಾರ್ಥ, ಔಷಧ ಹಾಗೂ ಇಂಧನಗಳ ಬೆಲೆಯು ಜನಸಾಮಾನ್ಯರ ಮೇಲೆ ಆರ್ಥಿಕ ದುಷ್ಪರಿಣಾಮ ಉಂಟುಮಾಡಿದೆ. ಅಲ್ಲದೆ ವರ್ಷಗಟ್ಟಲೇ ಕಾಡಿದ ಕೊರೊನಾ ಮಹಾಸೋಂಕಿನ ವಿರುದ್ಧ ಜನ ಹೋರಾಡಿ ರೋಸಿ ಹೋಗಿದ್ದಾರೆ. ಇಂತಹ ಕಾಲಮಾನದಲ್ಲಿ ಹಣಕಾಸಿನ ನೆರವು ಸಾಮಾನ್ಯರಿಗೆ ಅತ್ಯವಶ್ಯಕವಾಗಿದೆ.

- ಅಶ್ವಿನಿ ಎಸ್. ಅಂಗಡಿ,ಬಾದಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT