ಆತ್ಮಹತ್ಯೆಗೆ ಶರಣಾಗುವ ಬದಲು ಛಲದಿಂದ ಬದುಕಿದ್ದರೆ...

ಮೈಸೂರಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಯೊಬ್ಬರ ಪತ್ನಿ ಮತ್ತು ಇಬ್ಬರು ಮಕ್ಕಳು ಮನನೊಂದು ಬಂಟ್ವಾಳ ಸಮೀಪ ನದಿಗೆ ಹಾರಿ ಜೀವ ಬಿಟ್ಟಿರುವುದು ಹೃದಯವಿದ್ರಾವಕ ಘಟನೆ. ಭೂಮಿಯ ಮೇಲೆ ಯಾರೂ ಶಾಶ್ವತರಲ್ಲ. ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು. ಕುಟುಂಬದ ಒಬ್ಬರು ಸತ್ತರೆಂದು ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡರೆ ಹೇಗೆ? ಇದರಿಂದ ಅವರು ಸಾಧಿಸುವುದಾದರೂ ಏನನ್ನು? ಈ ಮಕ್ಕಳು 29 ಮತ್ತು 27 ವರ್ಷದವರಾಗಿದ್ದು, ದುಡಿಯುವ ವಯಸ್ಸಿಗೆ ಬಂದಿದ್ದರು. ಇವರೇ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡು ಛಲದಿಂದ ಬದುಕಿದ್ದರೆ ಸಾರ್ಥಕ ಜೀವನ ನಡೆಸಬಹುದಾಗಿತ್ತು. ‘ಮಾನವ ಜನ್ಮ ದೊಡ್ಡದು. ಇದ ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ’ ಎನ್ನುವ ದಾಸರ ನುಡಿಯನ್ನು ಅರಿತು ಬಾಳಬೇಕು.
-ರಾಜು ಬಿ. ಲಕ್ಕಂಪುರ, ಜಗಳೂರು
ಇನ್ನಷ್ಟು ಓದು
ಆತ್ಮಹತ್ಯೆಗೆ ಶರಣಾಗಿ ಸಾವು ಗೆದ್ದು ಬಂದ ರಘುನಾಥ್ ಹೇಳಿದ ಕುತೂಹಲಕಾರಿ ಸಂಗತಿಗಳು
ಎಂಥದ್ದೇ ಕಷ್ಟವಿರಲಿ... ಸಾವಿನ ನಿರ್ಧಾರವೇಕೆ? ಒಂದು ಕ್ಷಣ ಇದನ್ನು ಓದಿ
ನದಿಗೆ ಜಿಗಿದ ತಾಯಿ, ಮಕ್ಕಳು; ರಕ್ಷಿಸಲು ಯತ್ನಿಸಿದ್ದ ಸಾಕು ನಾಯಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.