ಉತ್ತರ ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಬರ ಆವರಿಸಿದ್ದು, ಹಿಂಗಾರು ಮಳೆಯೂ ಕೈ ಕೊಡುವ ಆತಂಕ ಎದುರಾಗಿದೆ. ಮಳೆ ಬಿದ್ದ ಪ್ರದೇಶದಲ್ಲಿ ಬೆಳೆದ ಹೆಸರು, ಉದ್ದು ಇತ್ಯಾದಿ ಧಾನ್ಯಗಳ ಖರೀದಿಯನ್ನು 4 ಕ್ವಿಂಟಲ್ಗೆ ಸೀಮಿತಗೊಳಿಸಿದರೆ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕುವ ಅಪಾಯ ಹೆಚ್ಚಿದೆ. ಈ ವಾಸ್ತವವನ್ನು ಮನಗಂಡು, ರೈತರ ಪೂರ್ತಿ ಫಸಲನ್ನು ಖರೀದಿಸುವಂತೆ ರಾಜ್ಯದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.