ಫುಟ್ಬಾಲ್ ಹಾಗೂ ಹಾಕಿ ಫೆಡರೇಷನ್ಗಳಲ್ಲಿ ನಡೆದ ಅವಾಂತರಗಳನ್ನು ಗಮನಿಸಿದ ನ್ಯಾಯಾಲಯವು ಫೆಡರೇಷನ್ಗಳ ನಿರ್ಲಜ್ಜ ನಿಯಮಗಳಿಗೆ ಕಡಿವಾಣ ಹಾಕಲು ಸಿಒಎ ನೇಮಿಸಬೇಕಾಯಿತು. ಯಾವುದೇ ಮೂಲ ಸೌಲಭ್ಯಗಳಿಲ್ಲದ ಕುಗ್ರಾಮಗಳ ಅಥವಾ ಪಟ್ಟಣ ಪ್ರದೇಶದ ಪ್ರತಿಭೆಗಳನ್ನು ಹೆಕ್ಕಿ ತೆಗೆದು, ನಿರ್ಲಕ್ಷಿತ ಕ್ರೀಡಾ ಕ್ಷೇತ್ರವನ್ನು ಪೋಷಿಸಬೇಕಾದ ಕ್ರೀಡಾ ಸಂಸ್ಥೆಗಳು ಸ್ವಜನಪಕ್ಷಪಾತ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿವೆ. ಈ ಮೂಲಕ ಕ್ರೀಡಾ ಕ್ಷೇತ್ರದ ಮೇಲೆ ಚಪ್ಪಡಿ ಎಳೆಯಲು ಹೊರಟಿವೆ. ಪ್ರಧಾನ ಮಂತ್ರಿ ಅವರ ‘ಖೇಲೊ ಇಂಡಿಯಾ’ ಕನಸು ಸಾಕಾರಗೊಳ್ಳಬೇಕಾದರೆ, ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಪ್ರತಿಭೆಗಳನ್ನು ಮಾತ್ರ ಫೆಡರೇಷನ್ಗಳಿಗೆ ಆಯ್ಕೆ ಮಾಡಬೇಕಾಗಿದೆ. ಹಾಗಾದಾಗ ಮಾತ್ರ ಕ್ರೀಡೆಯ ಅಭಿವೃದ್ಧಿ ಸಾಧ್ಯ.