ಕುಡಿಯುವ ನೀರು, ಮೂಲ ಸೌಕರ್ಯಗಳನ್ನು ಒದಗಿಸುವ ನೆಪದಲ್ಲಿ ಸರ್ಕಾರವು ಪರಿಸರವನ್ನು ನಿರ್ಲಕ್ಷಿಸುವುದು ಎದ್ದು ಕಾಣುತ್ತಿದೆ. ಇಂತಹ ದುಡುಕಿನ ನಿರ್ಧಾರಗಳಿಂದ ಜನವಿರೋಧಿ ಅಲೆಯನ್ನು ಸರ್ಕಾರ ಎದುರಿಸುತ್ತಿರುವುದು ಇದೇ ಮೊದಲ ಸಲವಲ್ಲ. ಬೆಂಗಳೂರಿನಲ್ಲಿ ಕಟ್ಟಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಯಾಗಲಿ, ಕಾರ್ಯಗತವಾಗುತ್ತಿರುವ ಎತ್ತಿನಹೊಳೆ ಯೋಜನೆಯಾಗಲಿ, ಈಗಿನ ಲಿಂಗನಮಕ್ಕಿ ಪ್ರಸ್ತಾವವಾಗಲಿ ಎಲ್ಲವೂ ವಸ್ತುಸ್ಥಿತಿಯನ್ನು ಅರಿಯದ, ದೂರದೃಷ್ಟಿಯಿಲ್ಲದ ಬಾಲಿಶ ಚಿಂತನೆಗಳಾಗಿವೆ.