‘ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯಪ್ರೇರಿತ’ ಎಂದಿದ್ದಾರೆ ಬಿಜೆಪಿ ಮುಖಂಡ ಸಿ.ಟಿ.ರವಿ (ಪ್ರ.ವಾ., ಸೆ. 28). ಸರಿಯೇ, ಕೃಷಿ ಮಸೂದೆ ರೈತರಿಗೆ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ರಾಜಕೀಯಪ್ರೇರಿತವಾಗಿದ್ದರೆ ತಪ್ಪೇನು? ನಮ್ಮ ರಾಜ್ಯದಲ್ಲಿಯೇ ಈಗ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಬೆಳೆಗಾರರ ಗತಿ ಏನಾಗಿದೆ? ರಸಗೊಬ್ಬರ ಬೆಲೆ ಗಗನಕ್ಕೇರಿದ್ದು ರೈತ ಬೆಳೆದ ಬೆಳೆಯ ಬೆಲೆ ಪಾತಾಳಕ್ಕಿಳಿದಿದೆ. ಹೀಗಾದಾಗ ರೈತರ ಹಿತ ಕಾಯುವವರು ಯಾರು?