ಗಾಂಧಿ ಜಯಂತಿಯಂದು ಬೆಳಗಿನಿಂದ ಸಂಜೆಯವರೆಗೆ ಗಾಂಧಿಯುಗದ ಬಾಳು, ಬದುಕು, ಸ್ವಾತಂತ್ರ್ಯ ಸಂಗ್ರಾಮ, ದಾಸ್ಯ ವಿಮುಕ್ತಿ... ಅಬ್ಬಾ, ಮಾಧ್ಯಮಗಳಿಂದ ತಿಳಿದ ಆ ಮಹನೀಯನ ಬದುಕು ತೆರೆದ ಪುಸ್ತಕದಂತೆ ಗೋಚರಿಸಿತು. ನದಿ ತೀರದಲ್ಲಿ ನಿರ್ಗತಿಕ ಮಹಿಳೆಗೆ ತನ್ನ ವಸ್ತ್ರ ದಾನ ಮಾಡಿ, ಮುಂದೆಂದೂ ಮೈತುಂಬ ಬಟ್ಟೆ ತೊಡಲಿಲ್ಲ. ಯಾವಾಗಲೂ ಮೂರನೇ ದರ್ಜೆ ರೈಲು ಪ್ರಯಾಣ, ಸಮಯ ಪ್ರಜ್ಞೆಗೆ ಬಾರದ ಸೈಕಲ್ ಸವಾರಿ ಒಂದೇ, ಎರಡೇ...