ಭಾಷೆ ಆಧಾರದ ಮೇಲೆ ರಾಜ್ಯಗಳು ವಿಂಗಡಣೆಯಾದ ಮೇಲೆ ಕನ್ನಡ ಭಾಷೆಯು ರಾಜ್ಯ ಭಾಷೆಯಾಗಿ ಗಟ್ಟಿಯಾಗಿ ಬೇರೂರಿಲ್ಲ. 80ರ ದಶಕದಲ್ಲಿ ನಾವು ಪ್ರಾದೇಶಿಕ ವೈವಿಧ್ಯದ ಹಿನ್ನೆಲೆಯಲ್ಲಿ ಸರ್ಕಾರಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಹಾರ್, ಚಿತ್ರಮಂಜರಿ ನೋಡುತ್ತಾ ಬೆಳೆದೆವು. ಕನ್ನಡದ ರಾಜ್ಕುಮಾರ್, ವಿಷ್ಣುವರ್ಧನ್ ಅವರಂತೆ ಹಿಂದಿಯ ಅಮಿತಾಭ್ ಬಚ್ಚನ್, ಧರ್ಮೇಂದ್ರ ಅಂತಹ ನಟರು ನಮ್ಮ ಮನಸ್ಸಿನಾಳಕ್ಕೆ ಇಳಿದರು. ಈ ರೀತಿಯ ಮನರಂಜನೆಯ ಜಗತ್ತು ಭಾಷೆಯ ಗಡಿಯನ್ನು ದಾಟಿ ತನ್ನ ನೆಲೆ ವಿಸ್ತರಿಸಿಕೊಂಡಿದೆ. ಹಿಂದಿಯನ್ನು ನಾವೀಗ ರಾಷ್ಟ್ರಭಾಷೆಯಾಗಿ ನಿರಾಕರಿಸಬಹುದು. ಆದರೆ ದೇಶವ್ಯಾಪಿ ಸಂಪರ್ಕಭಾಷೆಯಾಗಿ ನಿರಾಕರಿಸಲು ಸಾಧ್ಯವಿಲ್ಲ. ಏಕೆಂದರೆ ಆ ಬೇರುಗಳು ಈಗಾಗಲೇ ಭೂಮಿಯ ತಳದಾಳಕ್ಕೆ ಇಳಿದುಬಿಟ್ಟಿವೆ.