ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌: ಈ ಕ್ರಮ ಬೇಕೇ?

ಅಕ್ಷರ ಗಾತ್ರ

ಅಂಗಡಿ, ತರಕಾರಿ ಮಾರುಕಟ್ಟೆ ಹಾಗೂ ರಸ್ತೆ ಬದಿ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಸತತವಾಗಿ ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಳ್ಳು ತ್ತಾರೆ. ಬಹಳ ನಿಷ್ಠೆಯಿಂದ ಅವರಿಗೆ ಸಾವಿರಗಟ್ಟಲೆ ದಂಡ ವಿಧಿಸುತ್ತಾರೆ. ಈ ಕೆಲಸ ಒಳ್ಳೆಯದೆ. ಆದರೆ, ಅಷ್ಟಾದರೂ ಇಂದಿಗೂ ಎಂದಿನಂತೆ ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ತೆಳು ಪ್ಲಾಸ್ಟಿಕ್ ಕೈಚೀಲ ರಾಜಾರೋಷವಾಗಿ ಹಾರಾಡುತ್ತಲೇ ಇದೆ.

ಈ ಕೈಚೀಲಗಳನ್ನು ವ್ಯಾಪಾರಸ್ಥರು ಸಗಟು ವ್ಯಾಪಾರಸ್ಥರಿಂದ ಹಾಗೂ ಸಗಟು ವ್ಯಾಪಾರಸ್ಥರು ಕಾರ್ಖಾನೆಗಳಿಂದ ಕೊಂಡು ತರುತ್ತಾರೆ. ಹಾಗಿದ್ದಲ್ಲಿ ಈ ದಾಳಿ, ದಂಡ, ವಶಪಡಿಸಿಕೊಳ್ಳುವ ‘ಸರಣಿ ಧಾರಾವಾಹಿ’ಯ ಅವಶ್ಯಕತೆಯಾದರೂ ಏನು? ಅಧಿಕಾರಿಗಳು ಬಹಳ ಮುಖ್ಯವಾಗಿ, ಕಾರ್ಖಾನೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ತಯಾರಿಕೆಗೆ ತಡೆ ಒಡ್ಡಿದರೆ ಸಮಸ್ಯೆ ಬಗೆಹರಿದಂತೆ ಅಲ್ಲವೇ? ಆ ಪ್ಲಾಸ್ಟಿಕ್ ಅನ್ನು ಮನೆಯಲ್ಲಿ ಜನ ತಯಾರಿಸಲು ಸಾಧ್ಯವೇ?

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT