ಅಕ್ರಮ ಗಣಿಗಾರಿಕೆಯಿಂದ ಮಂಡ್ಯದ ಬೇಬಿ ಬೆಟ್ಟ ದಿನೇ ದಿನೇ ಕರಗುತ್ತಿದೆ, ಆದರೆ ಗಣಿ ಮಾಲೀಕರು ಉಳಿಸಿ ಕೊಂಡಿರುವ ರಾಜಧನ ಹಾಗೂ ದಂಡದ ಬಾಕಿ ಮೊತ್ತವು ಬೆಟ್ಟಕ್ಕಿಂತ ಎತ್ತರವಾಗಿ ಏರತೊಡಗಿರುವುದು (ಪ್ರ.ವಾ., ಜುಲೈ 12) ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷ್ಯಕ್ಕೆ ನಿದರ್ಶನ. ಗಣಿಗಾರಿಕೆಯು ಜಿಲ್ಲಾಡಳಿತದ ಕಣ್ಣು ತಪ್ಪಿಸಿ ನಡೆಯಲು ಸಾಧ್ಯವಿಲ್ಲ. ಹಾಗೆಯೇ ಇದು ಒಂದೆರಡು ದಿನಗಳಲ್ಲಿ ನಡೆಯುವ ಚಟುವಟಿಕೆ ಕೂಡ ಅಲ್ಲ. ಜನಪ್ರತಿ ನಿಧಿಗಳು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ಸರಿ ಯಾದ ಮಾಹಿತಿ ಒದಗಿಸಿ ತನಿಖೆಗೆ ಸಹಕರಿಸುವುದನ್ನು ಬಿಟ್ಟು, ಪರಸ್ಪರ ವೈಯಕ್ತಿಕ ಪ್ರತಿಷ್ಠೆಯ ಮಟ್ಟಕ್ಕೆ ವಿಷಯವನ್ನು ಬೆಳೆಸುವುದರಿಂದ ಮೂಲ ಆಶಯ ಮರೆಯಾಗುತ್ತದೆ.