ಸ್ವಿಸ್ ಬ್ಯಾಂಕಿನಲ್ಲಿ ಭಾರತ ಮೂಲದವರು ಹೊಂದಿದ್ದ ಹತ್ತಕ್ಕೂ ಹೆಚ್ಚು ಸುಪ್ತ ಖಾತೆಗಳಲ್ಲಿನ ಹಣಕ್ಕೆ ವಾರಸುದಾರರೇ ಇಲ್ಲವಾಗಿ, ಆ ಎಲ್ಲ ಹಣವೂ ಅಲ್ಲಿನ ಸರ್ಕಾರದ ಪಾಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ (ಪ್ರ.ವಾ., ನ. 11). ಇದನ್ನು ಓದಿದ ಕೂಡಲೇ, ರಾಜ್ಕುಮಾರ್ ಅಭಿನಯದ ‘ಪರೋಪಕಾರಿ’ ಚಿತ್ರದ ಹಾಡಿನಲ್ಲಿ ಬರುವ ‘ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ...’ ಎಂಬುದು ನೆನಪಾಯಿತು. ಈ ಮಾತುಗಳು ಎಷ್ಟು ಸತ್ಯ ಎಂಬುದು ಈ ಸಂದರ್ಭದಲ್ಲಿ ಮನದಟ್ಟಾಗುತ್ತದೆ.