ಅಂಚೆ ಇಲಾಖೆಯ ಅಧ್ವಾನಗಳ ಬಗ್ಗೆ ಡಾ. ಚೆನ್ನು ಹಿರೇಮಠ ಅವರು ಲೇಖನ ಬರೆದಿದ್ದಾರೆ (ಸಂಗತ, ಆ. 26). ಜನಸಾಮಾನ್ಯರು ಅಂಚೆ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಇನ್ನೂ ಗಟ್ಟಿಯಾಗಬೇಕು ಎಂಬುದನ್ನು ಸಂಬಂಧಿಸಿದ ಸಚಿವಾಲಯ ಗಮನಿಸಬೇಕು. ನೌಕರರ ನೇಮಕಾತಿ ಇಲ್ಲ, ಕರಾರು– ಗುತ್ತಿಗೆ ನೌಕರರೆಂದು ನೇಮಿಸಿಕೊಂಡು ಅವರಿಗೆ ಸಂಬಳ– ಸೌಕರ್ಯಗಳನ್ನು ಏಜೆನ್ಸಿಗಳ ಮೂಲಕ ಕೊಡಿಸುವ ತೀರ್ಮಾನವನ್ನು ಇಲಾಖೆಯ ನೌಕರರು
ತೆಗೆದುಕೊಂಡಿದ್ದಲ್ಲ.