<p>ಅಂಚೆ ಇಲಾಖೆಯ ಅಧ್ವಾನಗಳ ಬಗ್ಗೆ ಡಾ. ಚೆನ್ನು ಹಿರೇಮಠ ಅವರು ಲೇಖನ ಬರೆದಿದ್ದಾರೆ (ಸಂಗತ, ಆ. 26). ಜನಸಾಮಾನ್ಯರು ಅಂಚೆ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಇನ್ನೂ ಗಟ್ಟಿಯಾಗಬೇಕು ಎಂಬುದನ್ನು ಸಂಬಂಧಿಸಿದ ಸಚಿವಾಲಯ ಗಮನಿಸಬೇಕು. ನೌಕರರ ನೇಮಕಾತಿ ಇಲ್ಲ, ಕರಾರು– ಗುತ್ತಿಗೆ ನೌಕರರೆಂದು ನೇಮಿಸಿಕೊಂಡು ಅವರಿಗೆ ಸಂಬಳ– ಸೌಕರ್ಯಗಳನ್ನು ಏಜೆನ್ಸಿಗಳ ಮೂಲಕ ಕೊಡಿಸುವ ತೀರ್ಮಾನವನ್ನು ಇಲಾಖೆಯ ನೌಕರರು<br />ತೆಗೆದುಕೊಂಡಿದ್ದಲ್ಲ.</p>.<p>ಸರ್ಕಾರಿ ಸ್ವಾಮ್ಯದ ಎಲ್ಲವನ್ನೂ ಖಾಸಗಿಯವರ ಕೈಗೆ ಒಪ್ಪಿಸುವ ಖಾಸಗೀಕರಣದ ನೀತಿಯ ಬೀಜವನ್ನು ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಬಿತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದಕ್ಕೆ ಗೊಬ್ಬರ ಹಾಕಿ ಹೆಮ್ಮರವಾಗಿ ಬೆಳೆಸುತ್ತಿದೆ. ನಾವು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನೆ ಮಾಡಬೇಕು. ಸರ್ಕಾರಿ ಉದ್ದಿಮೆ, ಸಂಸ್ಥೆಗಳನ್ನು ಬಲಗೊಳಿಸಬೇಕು. ನಂತರ ನೌಕರರಿಗೆ ಕಾರ್ಯಕ್ಷಮತೆಯ ಪಾಠ ಹೇಳಿದರೆ ಸಮಂಜಸವಾದೀತು. ಅದನ್ನು ಬಿಟ್ಟು, ಇಲಾಖೆಯ ಕೆಳಹಂತದ ವ್ಯವಸ್ಥೆಯನ್ನು ಹಳಿಯುವುದರಿಂದ ಪ್ರಯೋಜನವಿಲ್ಲ.</p>.<p><strong>-ಕೆ.ಎಸ್.ವಿಮಲಾ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಚೆ ಇಲಾಖೆಯ ಅಧ್ವಾನಗಳ ಬಗ್ಗೆ ಡಾ. ಚೆನ್ನು ಹಿರೇಮಠ ಅವರು ಲೇಖನ ಬರೆದಿದ್ದಾರೆ (ಸಂಗತ, ಆ. 26). ಜನಸಾಮಾನ್ಯರು ಅಂಚೆ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಇನ್ನೂ ಗಟ್ಟಿಯಾಗಬೇಕು ಎಂಬುದನ್ನು ಸಂಬಂಧಿಸಿದ ಸಚಿವಾಲಯ ಗಮನಿಸಬೇಕು. ನೌಕರರ ನೇಮಕಾತಿ ಇಲ್ಲ, ಕರಾರು– ಗುತ್ತಿಗೆ ನೌಕರರೆಂದು ನೇಮಿಸಿಕೊಂಡು ಅವರಿಗೆ ಸಂಬಳ– ಸೌಕರ್ಯಗಳನ್ನು ಏಜೆನ್ಸಿಗಳ ಮೂಲಕ ಕೊಡಿಸುವ ತೀರ್ಮಾನವನ್ನು ಇಲಾಖೆಯ ನೌಕರರು<br />ತೆಗೆದುಕೊಂಡಿದ್ದಲ್ಲ.</p>.<p>ಸರ್ಕಾರಿ ಸ್ವಾಮ್ಯದ ಎಲ್ಲವನ್ನೂ ಖಾಸಗಿಯವರ ಕೈಗೆ ಒಪ್ಪಿಸುವ ಖಾಸಗೀಕರಣದ ನೀತಿಯ ಬೀಜವನ್ನು ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಬಿತ್ತಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದಕ್ಕೆ ಗೊಬ್ಬರ ಹಾಕಿ ಹೆಮ್ಮರವಾಗಿ ಬೆಳೆಸುತ್ತಿದೆ. ನಾವು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನೆ ಮಾಡಬೇಕು. ಸರ್ಕಾರಿ ಉದ್ದಿಮೆ, ಸಂಸ್ಥೆಗಳನ್ನು ಬಲಗೊಳಿಸಬೇಕು. ನಂತರ ನೌಕರರಿಗೆ ಕಾರ್ಯಕ್ಷಮತೆಯ ಪಾಠ ಹೇಳಿದರೆ ಸಮಂಜಸವಾದೀತು. ಅದನ್ನು ಬಿಟ್ಟು, ಇಲಾಖೆಯ ಕೆಳಹಂತದ ವ್ಯವಸ್ಥೆಯನ್ನು ಹಳಿಯುವುದರಿಂದ ಪ್ರಯೋಜನವಿಲ್ಲ.</p>.<p><strong>-ಕೆ.ಎಸ್.ವಿಮಲಾ,ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>