ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಕಾಳಜಿಯೊಂದಿಗೆ, ಕಡಿಮೆ ಬೆಲೆಯಲ್ಲಿ ಉತ್ತಮ ಔಷಧಗಳು ಲಭ್ಯವಾಗಲಿ ಎಂಬ ಸದಾಶಯದಿಂದ ದೇಶದ ಎಲ್ಲೆಡೆ ಜನೌಷಧ ಮಳಿಗೆಗಳನ್ನು ತೆರೆಯಲಾಗಿದೆ. ಆದರೆ ಬಹುತೇಕ ಮಳಿಗೆಗಳಲ್ಲಿ ರೋಗಿಗಳು ಕೇಳಿದ ಬಹಳಷ್ಟು ಔಷಧಗಳು ಸಿಗುತ್ತಿಲ್ಲ. ಕೇಳಿದಾಗಲೆಲ್ಲ ‘ದಾಸ್ತಾನು ಖಾಲಿಯಾಗಿದೆ, ಇನ್ನೂ ಬಂದಿಲ್ಲ, ಈಗ ಬರುತ್ತಿಲ್ಲ’ ಇತ್ಯಾದಿ ಕಾರಣಗಳನ್ನು ಅಂಗಡಿಯವರು ಹೇಳುತ್ತಿದ್ದಾರೆ. ಹೀಗಾದರೆ ಈ ಮಳಿಗೆಗಳನ್ನು ತೆರೆದ ಉದ್ದೇಶ ಸಫಲವಾಗುವುದಾದರೂ ಹೇಗೆ?