<p>‘ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮಸೂದೆ– 2022’ ಅನ್ನು ರಾಜ್ಯ ಸರ್ಕಾರ ಈಚೆಗೆ ಜರುಗಿದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದೆ. ಆ ಮಸೂದೆಯು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವುದರ ಕಡೆಗೆ ಮಾತ್ರ ಲಕ್ಷ್ಯ ಕೊಟ್ಟಿದ್ದು, ಅದರಲ್ಲಿ ತುಳು, ಕೊಡವ, ಕನ್ನಡ-ಕೊಂಕಣಿ ಹಾಗೂ ಬ್ಯಾರಿ ನುಡಿಗಳ ಭವಿಷ್ಯವನ್ನು ಕಾಯುವ ಮಾತೇ ಇಲ್ಲವಾಗಿದೆ. ಈ ವಿಷಯದಲ್ಲಿ ಆ ನಮ್ಮ ನಾಡುನುಡಿಗಳ ಹಿತವನ್ನು ಕಾಯುವ ಸಂಘಟನೆಗಳು ಎತ್ತಿರುವ ಆಕ್ಷೇಪ ನ್ಯಾಯಯುತವಾದದ್ದು.</p>.<p>ನಮ್ಮ ರಾಜ್ಯವು ಕನ್ನಡ ನುಡಿಯನ್ನು ಮಾತ್ರ ಆಡುವವರಿಗೆ ಸೇರಿದ್ದಲ್ಲ. ನಿಜಕ್ಕೂ, ಕರ್ನಾಟಕದ ಮುಖ್ಯ ನುಡಿಗಳೆಂದರೆ ಕನ್ನಡದ ಜೊತೆಗೆ ಈ ನುಡಿಗಳೂ ಹೌದಲ್ಲವೆ? ಕರ್ನಾಟಕದವರು ಎಂದರೆ ಈಗ ಹೆಸರಿಸಿದ ಆ ನುಡಿಗಳನ್ನು (ಮತ್ತು ಇನ್ನೆಷ್ಟೋ ದೇಸಿ ನುಡಿಗಳನ್ನು) ಆಡುವವರು ಕೂಡ ಹೌದಲ್ಲವೆ? ಅದು ಹಾಗಿರುವುದು ನಮ್ಮ ಭಾಗ್ಯವಲ್ಲವೆ? ಆದ್ದರಿಂದ ಕರ್ನಾಟಕ ಸರ್ಕಾರವು ಕನ್ನಡದ ಜೊತೆಗೆ ತುಳು, ಕೊಡವ, ಕನ್ನಡ-ಕೊಂಕಣಿ ಮತ್ತು ಬ್ಯಾರಿ ನುಡಿಗಳ ಸಮಗ್ರ ಅಭಿವೃದ್ಧಿಯೂ ನಡೆಯುವಂತೆ ಆ ಮಸೂದೆಗೆ ತಿದ್ದುಪಡಿ ತಂದು ಮಂಡಿಸಬೇಕಿದೆ.</p>.<p><strong>-ರಘುನಂದನ, ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮಸೂದೆ– 2022’ ಅನ್ನು ರಾಜ್ಯ ಸರ್ಕಾರ ಈಚೆಗೆ ಜರುಗಿದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದೆ. ಆ ಮಸೂದೆಯು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವುದರ ಕಡೆಗೆ ಮಾತ್ರ ಲಕ್ಷ್ಯ ಕೊಟ್ಟಿದ್ದು, ಅದರಲ್ಲಿ ತುಳು, ಕೊಡವ, ಕನ್ನಡ-ಕೊಂಕಣಿ ಹಾಗೂ ಬ್ಯಾರಿ ನುಡಿಗಳ ಭವಿಷ್ಯವನ್ನು ಕಾಯುವ ಮಾತೇ ಇಲ್ಲವಾಗಿದೆ. ಈ ವಿಷಯದಲ್ಲಿ ಆ ನಮ್ಮ ನಾಡುನುಡಿಗಳ ಹಿತವನ್ನು ಕಾಯುವ ಸಂಘಟನೆಗಳು ಎತ್ತಿರುವ ಆಕ್ಷೇಪ ನ್ಯಾಯಯುತವಾದದ್ದು.</p>.<p>ನಮ್ಮ ರಾಜ್ಯವು ಕನ್ನಡ ನುಡಿಯನ್ನು ಮಾತ್ರ ಆಡುವವರಿಗೆ ಸೇರಿದ್ದಲ್ಲ. ನಿಜಕ್ಕೂ, ಕರ್ನಾಟಕದ ಮುಖ್ಯ ನುಡಿಗಳೆಂದರೆ ಕನ್ನಡದ ಜೊತೆಗೆ ಈ ನುಡಿಗಳೂ ಹೌದಲ್ಲವೆ? ಕರ್ನಾಟಕದವರು ಎಂದರೆ ಈಗ ಹೆಸರಿಸಿದ ಆ ನುಡಿಗಳನ್ನು (ಮತ್ತು ಇನ್ನೆಷ್ಟೋ ದೇಸಿ ನುಡಿಗಳನ್ನು) ಆಡುವವರು ಕೂಡ ಹೌದಲ್ಲವೆ? ಅದು ಹಾಗಿರುವುದು ನಮ್ಮ ಭಾಗ್ಯವಲ್ಲವೆ? ಆದ್ದರಿಂದ ಕರ್ನಾಟಕ ಸರ್ಕಾರವು ಕನ್ನಡದ ಜೊತೆಗೆ ತುಳು, ಕೊಡವ, ಕನ್ನಡ-ಕೊಂಕಣಿ ಮತ್ತು ಬ್ಯಾರಿ ನುಡಿಗಳ ಸಮಗ್ರ ಅಭಿವೃದ್ಧಿಯೂ ನಡೆಯುವಂತೆ ಆ ಮಸೂದೆಗೆ ತಿದ್ದುಪಡಿ ತಂದು ಮಂಡಿಸಬೇಕಿದೆ.</p>.<p><strong>-ರಘುನಂದನ, ಬೆಂಗಳೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>