‘ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮಸೂದೆ– 2022’ ಅನ್ನು ರಾಜ್ಯ ಸರ್ಕಾರ ಈಚೆಗೆ ಜರುಗಿದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದೆ. ಆ ಮಸೂದೆಯು ಕನ್ನಡ ಭಾಷೆಯನ್ನು ಅಭಿವೃದ್ಧಿಪಡಿಸುವುದರ ಕಡೆಗೆ ಮಾತ್ರ ಲಕ್ಷ್ಯ ಕೊಟ್ಟಿದ್ದು, ಅದರಲ್ಲಿ ತುಳು, ಕೊಡವ, ಕನ್ನಡ-ಕೊಂಕಣಿ ಹಾಗೂ ಬ್ಯಾರಿ ನುಡಿಗಳ ಭವಿಷ್ಯವನ್ನು ಕಾಯುವ ಮಾತೇ ಇಲ್ಲವಾಗಿದೆ. ಈ ವಿಷಯದಲ್ಲಿ ಆ ನಮ್ಮ ನಾಡುನುಡಿಗಳ ಹಿತವನ್ನು ಕಾಯುವ ಸಂಘಟನೆಗಳು ಎತ್ತಿರುವ ಆಕ್ಷೇಪ ನ್ಯಾಯಯುತವಾದದ್ದು.