ಈ ಪ್ರಶ್ನೆಗೆ ಉತ್ತರ ಇದೆ. ಶಿಕ್ಷಣ, ಉದ್ಯೋಗ, ವಹಿವಾಟು ಸೇರಿದಂತೆ ಕನ್ನಡ ಭಾಷೆ ನಿತ್ಯ ಬದುಕಿನ ಸರಕಾಗಬೇಕು. ಅಂತಹ ವಾತಾವರಣ ಉಂಟು ಮಾಡಿದರೆ ಮಾತ್ರ ಕನ್ನಡ ಭಾಷೆ ಬೆಳೆಯಬಲ್ಲದು. ಆ ಇಚ್ಛಾಶಕ್ತಿ ಬರದ ಹೊರತು, ಸರ್ಕಾರದ ಕೃಪಾಪೋಷಿತ ಪ್ರಾಧಿಕಾರದಂತಹ ಸಂಘ ಸಂಸ್ಥೆಗಳು ಭುಸುಗುಡುತ್ತಲೇ ಇರಬೇಕಾಗುತ್ತದೆ, ಕಚ್ಚಲು ಸಾಧ್ಯವಾಗದಂತಹ ಹಾವಿನಂತೆ!