ಜನಪ್ರತಿನಿಧಿಗಳಾದವರು ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಸಹನೆ, ತಾಳ್ಮೆ, ಸಭ್ಯತೆಯಿಂದ ವರ್ತಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರ ಸಮ್ಮುಖದಲ್ಲಿ ಅಪಹಾಸ್ಯಕ್ಕೆ ಈಡಾಗಿ, ಅವರ ನಾಯಕತ್ವ ಗುಣದ ಮತ್ತೊಂದು ಮುಖ ಸಭಿಕರಿಗೆ ಪರಿಚಯವಾಗುವ ಮೂಲಕ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಯಾವುದೇ ಪಕ್ಷದ ಸಚಿವರಾಗಿರಲಿ, ಮುಖ್ಯಮಂತ್ರಿಯಾಗಿರಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಸರ್ಕಾರದ ಹಣದಿಂದಲೇ ವಿನಾ ರಾಜಕಾರಣಿಗಳ ಸ್ವಂತ ಹಣದಿಂದ ಅಲ್ಲ. ಕಾರ್ಯಕ್ರಮದಲ್ಲಿ ವಿಷಯವನ್ನು ಅಷ್ಟೊಂದು ವೈಯಕ್ತಿಕ ಪ್ರತಿಷ್ಠೆಯಂತೆ ತೆಗೆದುಕೊಂಡು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡು ಸಭಿಕರಿಗೆ ಮನರಂಜನೆ ಒದಗಿಸುವ ಅವಶ್ಯಕತೆ ಇರಲಿಲ್ಲ.