ಒಬ್ಬ ಯುವಕ ವಾಹನ ಚಲಾಯಿಸುವಾಗ ದಾರಿಯಲ್ಲಿ ಗಾಳಿಪಟದ ದಾರದಿಂದ ಕುತ್ತಿಗೆಗೆ ಆಳವಾದ ಗಾಯವಾಗಿ, ಇದನ್ನು ತಪ್ಪಿಸಲು ತನ್ನ ಕೈ ಬೆರಳುಗಳಿಂದ ಎಳೆದಾಗ ಬೆರಳುಗಳೂ ಕೊಯ್ದು ರಕ್ತ ಹರಿಯುವಷ್ಟು ಕಠಿಣವಾದ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾನೆ. ಈ ಸಂದರ್ಭದಲ್ಲಿ ಆತ, ಸರ್ಕಾರ ಗಾಳಿಪಟ ಹಾರಿಸುವುದನ್ನು ನಿಷೇಧಿಸಬೇಕು ಎಂದು ಕೇಳಿಕೊಳ್ಳುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ಆದರೆ ಆ ಅಪಘಾತ ನಡೆದದ್ದು ಗಾಳಿಪಟದಿಂದಲ್ಲ, ಬದಲಿಗೆ ಗಾಳಿಪಟ ಹಾರಿಸಲು ಬಳಸಿದ್ದ ಚೀನಾ ತಯಾರಿತ ಹತ್ತಿಯ ದಾರಕ್ಕೆ ಲೇಪಿಸಿದ್ದ ನುಣುಪಾದ ಗಾಜಿನ ಪುಡಿ ಹಾಗೂ ಅಂಟುದ್ರವ ಮಿಶ್ರಿತ ‘ಮಾಂಜಾ’ ಹೆಸರಿನ ದಾರದಿಂದ ಎಂಬುದು ಆ ಯುವಕನಿಗೆ ತಿಳಿದಿರಲಿಲ್ಲ ಎನಿಸುತ್ತದೆ.