ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಅಳೆದು ತೂಗಿ ಮಾತನಾಡಬೇಕಾಗುತ್ತದೆ. ಸಿಟ್ಟಿನ ಭರದಲ್ಲಿ ಹತೋಟಿ ಕಳೆದು
ಕೊಂಡು ಮಾತನಾಡಿದರೆ ಇಂಥ ಅವಾಂತರಗಳು ಸಂಭವಿಸುತ್ತವೆ. ತಾನು ಎರಡು ಪಕ್ಷಗಳ ಮುಖ್ಯಮಂತ್ರಿಯಲ್ಲ, ಇಡೀ
ರಾಜ್ಯದ ಮುಖ್ಯಮಂತ್ರಿ. ತನ್ನ ನಡೆ–ನುಡಿಗಳನ್ನು ಪ್ರಶ್ನಿಸುವ ಹಕ್ಕು ಈ ರಾಜ್ಯದ ಜನರಿಗೆ ಇದೆ ಎಂಬುದನ್ನು ಮುಖ್ಯ
ಮಂತ್ರಿ ಮನವರಿಕೆ ಮಾಡಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗದೆ, ಶಾಂತಚಿತ್ತದಿಂದ ಪ್ರತಿಕ್ರಿಯೆಗಳನ್ನು ನೀಡಬೇಕು. ಇಲ್ಲದಿದ್ದರೆ ಹೀಗೆ ಪದೇ- ಪದೇ ವಿವಾದದ ಕೇಂದ್ರಬಿಂದುವಾಗಿ ಜನರ ಟೀಕೆಗಳಿಗೆ ಒಳಗಾಗಬೇಕಾಗುತ್ತದೆ.