ಕೇರಳ ಸೇರಿದಂತೆ ದೇಶದ ಹಲವಾರು ಕಡೆಗಳಲ್ಲಿ ಜಾತಿ, ಧರ್ಮದ ನೆಪದಲ್ಲಿ ಕೆಲವು ಕಲಾವಿದರಿಗೆ, ಬಹಳ ಮುಖ್ಯವಾಗಿ ಹಾಡುಗಾರರಿಗೆ ತಮ್ಮ ಸಂಗೀತ ಸೇವೆ ನೀಡಲು ಅವಕಾಶ ಕೊಡದಿರುವುದು ಅಮಾನವೀಯವಾದುದು. ಈ ಹಿಂದೆ ಗಾಯಕ ಕೆ.ಜೆ.ಯೇಸುದಾಸ್ ಅವರಿಗೂ– ಅವರು ಹಿಂದೂ ದೇವರುಗಳ ಭಕ್ತರಾಗಿದ್ದರ ನಡುವೆಯೂ– ಕೆಲವು ದೇವಾಲಯಗಳಲ್ಲಿ ಹಾಡಲು ಅವಕಾಶ ಕೊಡದೆ ಇದೇ ರೀತಿಯ ಅವಮಾನ ಮಾಡಲಾಗಿತ್ತು. ಆದರೆ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಅವರಿಗೆ ಸಂಗೀತ ಸೇವೆ ನೀಡುವ ಅವಕಾಶವಿತ್ತು. ನಂತರ ಕೇರಳದ ದೇವಮಂದಿರಗಳಲ್ಲೂ ಅವರಿಗೆ ಅವಕಾಶ ನೀಡಲಾಯಿತು.