‘ಸಿಐಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸುರಕ್ಷತೆ ದೃಷ್ಟಿಯಿಂದ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ ಆರು ಗಂಟೆ ಅವಧಿಯಲ್ಲಿ ಯಾವುದೇ ವಾಹನದಲ್ಲಿ ಪ್ರಯಾಣಿಸಬಾರದು...’ ಎಂದು ಸಿಐಡಿ ಡಿಜಿಪಿ ಸೂಚನೆ ನೀಡಿರುವುದು ವರದಿಯಾಗಿದೆ (ಪ್ರ.ವಾ., ಸೆ. 9). ಇದೆಂತಹ ವಿಚಿತ್ರ ಆದೇಶ?! ಅಪಘಾತ ಆಗುತ್ತದೆಂದು ಸಂಚಾರವನ್ನೇ ನಿರ್ಬಂಧಿಸಬೇಕೆ? ಸಿಐಡಿ ಅಧಿಕಾರಿಗಳು ಮಾತ್ರ ಮನುಜರೇ? ಸಾರ್ವಜನಿಕ ಬಸ್ಸುಗಳಲ್ಲಿ ಸಂಚರಿಸುವವರು, ರಾತ್ರಿ ಪಾಳಿಯಲ್ಲಿ ಹತ್ತು ಹಲವು ಕರ್ತವ್ಯಗಳನ್ನು ನಿರ್ವಹಿಸುವವರು, ಪೊಲೀಸ್ ವಾಹನಗಳಲ್ಲಿ ಗಸ್ತು ತಿರುಗುವವರು, ಹಾಲು, ಪೇಪರ್ ಹಾಕುವವರು ಸೇರಿದಂತೆ ಬೇರೆಲ್ಲರೂ ಮನುಜರಲ್ಲವೇ?