<p>‘ಎಲ್ಲಿಯವರೆಗೆ ಹೆದರುವವರು ಇರುತ್ತಾರೋ ಅಲ್ಲಿಯವರೆಗೆ ಹೆದರಿಸುವವರು ಇದ್ದೇ ಇರುತ್ತಾರೆ!’ ಎಂದು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಮಾತು ಪ್ರಸ್ತುತವೆನಿಸುತ್ತದೆ. ಕೋಲಾರ ಜಿಲ್ಲೆಯ ನಂಗಲಿ ಭಾಗದಲ್ಲಿ ನಡೆದಿರುವ ಪ್ರಕರಣದಿಂದ ಈ ಮಾತು ನೆನಪಾಯಿತು. ದಲಿತ ಯುವಕನು ಒಕ್ಕಲಿಗ ಯುವಕರ ಬೈಕ್ ಅನ್ನು ಹಿಂದಿಕ್ಕಿದ್ದಕ್ಕೆ ಆ ಜಾತಿಯ ನಾಲ್ವರು ಯುವಕರು ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ, ಇದರಿಂದ ಮನನೊಂದಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೆಂತಹ ವಿಪರ್ಯಾಸ. ಅದೇ ಯುವಕ ಆ ನಾಲ್ವರನ್ನು ಧೈರ್ಯದಿಂದ ಎದುರಿಸಿ, ಜಾತಿ ನಿಂದನೆ ಮಾಡಿದವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸಿದ್ದರೆ ಆತ ಇತರ ದಲಿತರಿಗೆ ಮಾದರಿಯಾಗುತ್ತಿದ್ದ. ಅದು ಬಿಟ್ಟು ಅವಮಾನವಾಯಿತು ಎಂದು ಪ್ರಾಣ ಬಿಟ್ಟರೆ ಏನು ಸಾಧಿಸಿದಂತಾಯಿತು?</p>.<p>ದಲಿತ ಯುವಕರು ಯಾವುದೇ ಅವಮಾನಗಳಿಗೆ ಜಗ್ಗದೆ ‘ಶಿಕ್ಷಣ, ಸಂಘಟನೆ, ಹೋರಾಟ’ ಎನ್ನುವ ಅಂಬೇಡ್ಕರ್ ಅವರ ಅಸ್ತ್ರವನ್ನು ಉಪಯೋಗಿಸಿ ಎದುರಾಳಿಗಳ ಎದೆ ನಡುಗುವಂತೆ ಬದುಕಬೇಕು. ದಲಿತ ಎನ್ನುವ ಕೀಳರಿಮೆಯನ್ನು ಮೊದಲು ಕಿತ್ತು ಬಿಸಾಕಿದರೆ ಆಗ ಭಯ ತಾನಾಗಿಯೇ ದೂರವಾಗುತ್ತದೆ.</p>.<p>- ರಾಜು ಬಿ. ಲಕ್ಕಂಪುರ,ಜಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಎಲ್ಲಿಯವರೆಗೆ ಹೆದರುವವರು ಇರುತ್ತಾರೋ ಅಲ್ಲಿಯವರೆಗೆ ಹೆದರಿಸುವವರು ಇದ್ದೇ ಇರುತ್ತಾರೆ!’ ಎಂದು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಮಾತು ಪ್ರಸ್ತುತವೆನಿಸುತ್ತದೆ. ಕೋಲಾರ ಜಿಲ್ಲೆಯ ನಂಗಲಿ ಭಾಗದಲ್ಲಿ ನಡೆದಿರುವ ಪ್ರಕರಣದಿಂದ ಈ ಮಾತು ನೆನಪಾಯಿತು. ದಲಿತ ಯುವಕನು ಒಕ್ಕಲಿಗ ಯುವಕರ ಬೈಕ್ ಅನ್ನು ಹಿಂದಿಕ್ಕಿದ್ದಕ್ಕೆ ಆ ಜಾತಿಯ ನಾಲ್ವರು ಯುವಕರು ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ, ಇದರಿಂದ ಮನನೊಂದಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೆಂತಹ ವಿಪರ್ಯಾಸ. ಅದೇ ಯುವಕ ಆ ನಾಲ್ವರನ್ನು ಧೈರ್ಯದಿಂದ ಎದುರಿಸಿ, ಜಾತಿ ನಿಂದನೆ ಮಾಡಿದವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸಿದ್ದರೆ ಆತ ಇತರ ದಲಿತರಿಗೆ ಮಾದರಿಯಾಗುತ್ತಿದ್ದ. ಅದು ಬಿಟ್ಟು ಅವಮಾನವಾಯಿತು ಎಂದು ಪ್ರಾಣ ಬಿಟ್ಟರೆ ಏನು ಸಾಧಿಸಿದಂತಾಯಿತು?</p>.<p>ದಲಿತ ಯುವಕರು ಯಾವುದೇ ಅವಮಾನಗಳಿಗೆ ಜಗ್ಗದೆ ‘ಶಿಕ್ಷಣ, ಸಂಘಟನೆ, ಹೋರಾಟ’ ಎನ್ನುವ ಅಂಬೇಡ್ಕರ್ ಅವರ ಅಸ್ತ್ರವನ್ನು ಉಪಯೋಗಿಸಿ ಎದುರಾಳಿಗಳ ಎದೆ ನಡುಗುವಂತೆ ಬದುಕಬೇಕು. ದಲಿತ ಎನ್ನುವ ಕೀಳರಿಮೆಯನ್ನು ಮೊದಲು ಕಿತ್ತು ಬಿಸಾಕಿದರೆ ಆಗ ಭಯ ತಾನಾಗಿಯೇ ದೂರವಾಗುತ್ತದೆ.</p>.<p>- ರಾಜು ಬಿ. ಲಕ್ಕಂಪುರ,ಜಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>