ಪತ್ರಕರ್ತ ಶಾಹಿದ್ ಸಿದ್ಧಿಕಿ ಅವರು ದಿನದ ಟ್ವೀಟ್ನಲ್ಲಿ (ಪ್ರ.ವಾ., ಮಾರ್ಚ್ 11) ಹೇಳಿರುವ ಮಾತು ಸ್ವಾಗತಾರ್ಹವಾಗಿದೆ. ಭಾರತವು ಭಯೋತ್ಪಾದನೆಯ ವಿರುದ್ಧ ಸೆಣಸುತ್ತಿದೆಯೇ ಹೊರತು ಪಾಕಿಸ್ತಾನದ ವಿರುದ್ಧವಲ್ಲ. ದೇವರು ಒಬ್ಬನೇ, ನಾಮ ಹಲವು ಎಂದು ನಂಬಿ, ಸರ್ವೇ ಜನಾಃ ಸುಖಿನೋ ಭವಂತು ಎಂದು ಪ್ರಾರ್ಥಿಸುವ ಭಾರತದಲ್ಲಿ, ಈ ಹಿಂಸೆ, ಭಯೋತ್ಪಾದನೆ ದೇಶದ ಅಭಿವೃದ್ಧಿಗೆ ಮಾರಕವಾಗಿವೆ.