ಒಬ್ಬ ಶಿಕ್ಷಕ ಇಡೀ ದಿನ ನಲಿ– ಕಲಿ ತರಗತಿಗಳಿಗೆ ಮಾತ್ರ ಬೋಧಿಸುತ್ತಿದ್ದರೆ ಆ ಶಿಕ್ಷಕರ ಜ್ಞಾನವಲಯ ವಿಸ್ತಾರಗೊಳ್ಳುವುದಾದರೂ ಹೇಗೆ? ಶೈಕ್ಷಣಿಕ ವ್ಯವಸ್ಥೆಯ ಅಳತೆಗೋಲುಗಳಾದ ವೈಯಕ್ತಿಕ ಭಿನ್ನತೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಗುರುತಿಸುವಿಕೆ, ತಿದ್ದುವಿಕೆಗಳಿಗೆ ಅವಕಾಶವಾದರೂ ಎಲ್ಲಿ? ಈ ವ್ಯವಸ್ಥೆಯಿಂದ ಶಿಕ್ಷಕ– ವಿದ್ಯಾರ್ಥಿಗಳಿಬ್ಬರಿಗೂ ಪ್ರಯೋಜನವಿಲ್ಲ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸ್ಥಗಿತಗೊಳಿಸಬೇಕು.