ಒಂದು ಸ್ವಾರಸ್ಯವೆಂದರೆ, ರಾಷ್ಟ್ರಕವಿ ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನ’ದ ಆದಿಯಲ್ಲಿ (ಪುಟ 6) ಕಂಬಾರರನ್ನು ಸ್ಮರಿಸಿರುವುದು: ‘... ನನ್ನಯ್ಯ ಫಿರ್ದೂಸಿ ‘ಕಂಬಾರ’ವಿಂದರಿಗೆ...’ ಇಲ್ಲಿ ‘ಕಂಬಾರವಿಂದರಿಗೆ’ ಎಂಬುದನ್ನು ‘ಕಂಬ– ಅರವಿಂದರಿಗೆ’ ಎಂದು ಬಿಡಿಸಬೇಕು ಎಂದು ಕೆಲವರು ಹೇಳಬಹುದು. ಆದರೆ ‘ಕಂಬಾರ–ವಿಂದರಿಗೆ’ ಎಂದೂ ಬಿಡಿಸಬಹುದಲ್ಲ! ಹಾಗಾದರೆ, ‘ವಿಂದ’ ಎಂದರೇನು? ಅದು ‘ಅರವಿಂದ’ ಶಬ್ದದ ಹ್ರಸ್ವರೂಪವಾಗಬಹುದು (ಅರ್ಥರಹಿತವಲ್ಲ, ‘ವಿಂದ’; ಅದಕ್ಕೆ ಕಾಯುವವನು ಎಂದರ್ಥ).